ಹಾಸನ : ಪಡಿತರ ವಿತರಕರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಡಿತರ ವಿತರಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದ ಬ್ರಾಹ್ಮಣರ ಬೀದಿಯಲ್ಲಿ ನಡೆದಿದೆ.
ನಗರದ ಹಾಸನಾಂಬ ದೇವಾಲಯದ ಬಳಿ ಇರುವ ಪಡಿತರ ವಿತರಣಾ ಕೇಂದ್ರದ ಬಳಿ ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಇನ್ನೆರಡು ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪಡಿತರ ವಿತರಣಾ ಕೇಂದ್ರದ ಪಕ್ಕ ಜರ್ಮನ್ ಟೆಂಟ್ ಅಳವಡಿಸಲಾಗುತ್ತಿದೆ.
ಹೀಗಾಗಿ ಪಡಿತರ ತೆಗೆದುಕೊಳ್ಳಲು ಸರತಿ ಸಲ್ಲಿ ನಿಂತಿರುವ ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಈ ವೇಳೆ ಪಡಿತರ ವಿತರಕರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ ಎಂದು ಆರೂಪಿಸಲಾಗಿದ್ದು ಪಡಿತರ ಕೇಂದ್ರದ ಮುಂದೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ.
PublicNext
21/10/2024 01:45 pm