ರಬಕವಿ-ಬನಹಟ್ಟಿ: ತಾಲೂಕಿನ ತಮದಡ್ಡಿ ಗ್ರಾಮದ ಚಂದ್ರಗಿರಿದೇವಿ ಹಾಗೂ ಗಂಗಾಧರ ಮಠದಲ್ಲಿ ಅಗ್ನಿವೀರ ಸೇನೆಗೆ ಆಯ್ಕೆಯಾದ ಗ್ರಾಮದ ಅಭಿಷೇಕ ಸೂರಗೊಂಡ, ವಿನಾಯಕ ಹುದ್ದಾರ, ಪ್ರದೀಪ ಪಾಟೀಲ ಯುವಕರನ್ನು ಶ್ರೀಮಠದ ಸೋಮಯ್ಯ ಮಠದ ಸ್ವಾಮಿಗಳು ಸನ್ಮಾನಿಸಿ, ಮಾತನಾಡಿ, ಭಾರತ ಮಾತೆಯ ಸೇವೆಗೆ ತೆರಳುತ್ತಿರುವ ಯೋಧರು ಗ್ರಾಮ ಸೇರಿದಂತೆ ದೇಶದ ರಕ್ಷಣೆ ಮಾಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಕಮಿಟಿ ಅಧ್ಯಕ್ಷ ಲಕ್ಷ್ಮಣ ಯಾದವಾಡ, ಗ್ರಾಮದ ದಾನಯ್ಯ ಮಠಪತಿ, ಸಿದ್ದು ಹುದ್ದಾರ, ಜಗದೀಶ ಝಾರಿ, ಗಂಗಪ್ಪ ಅಕ್ಕಿವಾಟ ಸೇರಿದಂತೆ ಶ್ರೀಮಠದ ಸದ್ಭಕ್ತರು ಇದ್ದರು.
Kshetra Samachara
21/10/2024 09:16 am