ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಟ್ಟುಬಿಡದೆ ಸುರಿಯುತ್ತಿರುವ ಮಳೆ

ರಬಕವಿ-ಬನಹಟ್ಟಿ : ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಲ್ಲೇ ನೇಕಾರರು ತಮ್ಮ ಉದ್ಯೋಗಗಳಿಗಾಗಿ ತೆರಳುವ ದೃಶ್ಯಗಳು ಕಾಣಸಿಗುತ್ತಿವೆ. ಸಂಪೂರ್ಣ ತಂಪಾದ ವಾತಾವರಣ ನಿರ್ಮಾಣವಾಗಿರುವುದರಿಂದ ನೇಕಾರಿಕೆ ಉದ್ಯೋಗಕ್ಕೂ ಮಳೆ ಅಡಚಣೆಯಾಗಿದೆ.

ಮಹಾಲಿಂಗಪೂರ ದಲ್ಲಿ ನೇಕಾರನ ಮಗ್ಗದ ಮೇಲೆ‌ ಗೊಡೆ ಕುಸಿದು ಬಿದ್ದಿದೆ. ಹಾಗಾಗಿ ಮಗ್ಗ ಸೇರಿದಂತೆ ನೆಯ್ಗೆ ನೂಲು ಹಾನಿಗೊಳಗಾಗಿದೆ.

ತೇರದಾಳದಲ್ಲಿ ಅಲ್ಲಮಪ್ರಭು ಪರಂ ಜ್ಯೋತಿ ಯಾತ್ರೆಯು ಮಳೆಯಲ್ಲಿಯೇ ಮನೆಮನೆ ಸಂಚರಿಸಿತು. ಒಟ್ಟಿನಲ್ಲಿ ನಿರಂತರ ಮಳೆಯಿಂದಾಗಿ ಕೆಲವೆಡೆ ತೊಂದರೆಯಾದರೇ, ಇನ್ನೂ ಕೆಲವೆಡೆ ಮಳೆಯಲ್ಲಿ ಕೆಲಸ ಕಾರ್ಯಗಳು ಮುಂದುವರೆದಿವೆ.

Edited By : PublicNext Desk
Kshetra Samachara

Kshetra Samachara

18/10/2024 11:04 am

Cinque Terre

1.74 K

Cinque Terre

0