ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಅತ್ತ ಕೂಲಿಯೂ ಇಲ್ಲ ಇತ್ತ ಪಡಿತರವೂ ಇಲ್ಲ ಜನರ ಪರದಾಟ

ಚಿಕ್ಕಮಗಳೂರು: ಆಹಾರ ಇಲಾಖೆಯ ಸಾಫ್ಟ್ವೇರ್ ಬದಲಾವಣೆಯಿಂದಾಗಿ ಪಡಿತರ ಪಡೆಯಲು ಎರಡು ಮೂರು ದಿನಗಳಿಂದ ಜನರು ಕಾದು ಕಾದು ವಾಪಸಾಗುತ್ತಿದ್ದಾರೆ. ಕಳಸ ತಾಲೂಕಿನ ಕಾರ್ಗದ್ದೆ, ಮಮ್ಮುಳ್ಳಿ, ಮುಜೇಖಾನ್, ಮರಸಣಿಗೆ, ಬಸರೀಕಟ್ಟೆ ಸೇರಿದಂತೆ ಹತ್ತಾರು ಹಳ್ಳಿಗರ ಜನರು ಪರದಾಟ ನಡೆಸುತ್ತಿದ್ದು ಅತ್ತ ಕೂಲಿಯೂ ಇಲ್ಲ ಇತ್ತ ಅಕ್ಕಿಯೂ ಇಲ್ಲದಂತಾಗಿದೆ. ಪಡಿತರವನ್ನು ಪಡೆಯಲು ಹತ್ತಾರು ಕಿಲೋಮೀಟರ್ ದೂರದಿಂದ ಕಾಡಂಚಿನ ಕುಗ್ರಾಮಗಳಿಂದ ಬಂದು ಬೆಳಗಿನಿಂದಲೂ ಸಂಜೆವರೆಗೆ ಕಾದರೂ ಅಕ್ಕಿ ಸಿಗುತ್ತಿಲ್ಲವೆಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Edited By : Vinayak Patil
Kshetra Samachara

Kshetra Samachara

20/10/2024 02:58 pm

Cinque Terre

4.14 K

Cinque Terre

0

ಸಂಬಂಧಿತ ಸುದ್ದಿ