ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಬೆಳ್ಳಂಬೆಳಗ್ಗೆ ನಡೆದ ಗೂಳಿ ಕಾಳಗ ಕೆಲಕಾಲ ವಾಹನ ಸವಾರರ ಮತ್ತು ಪಾದಚಾರಿಗಳ ಆತಂಕಕ್ಕೆ ಕಾರಣವಾಗಿತ್ತು. ಮುಂಜಾನೆ ನಗರದ ಮೊಣ್ಣಪ್ಪ ಗ್ಯಾರೇಜ್ ಜಂಕ್ಷನ್ ಬಳಿ ಎರಡು ಗೂಳಿಗಳು ಭರ್ಜರಿ ಕಾಳಗ ನಡೆಸಿದವು. ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಒಟ್ಟು ಮೂರು ಗೂಳಿಗಳು ಒಂದೆಡೆ ಸೇರಿದ್ದ ಸಂದರ್ಭ ಎರಡು ಗೂಳಿಗಳ ನಡುವೆ ಭಾರೀ ಕಾಳಗವೇ ನಡೆದುಹೋಗಿತ್ತು. ಸೋಲೇ ಇಲ್ಲ ಎಂಬಂತೆ ಗಂಟೆಗಟ್ಟಲೆ ಗುದ್ದಾಡಿ ಕೊನೆಗೆ ಗೂಳಿಗಳು ಶಾಂತವಾಗಿದ್ದು, ಎಲ್ಲರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡ್ತು. ಇನ್ನು ನಗರದಲ್ಲಿ ಇತ್ತೀಚೆಗೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗ್ತಿದ್ದು, ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿರೋದರ ಬಗ್ಗೆ ಜನ ಕೂಡ ಅಸಮಧಾನ ವ್ಯಕ್ತಪಡಿಸಿದರು.
Kshetra Samachara
16/10/2024 11:54 am