ಕೊಡಗು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಜಲಾಶಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಮಂತರ್ ಗೌಡ ಪೂಜೆ ಸಲ್ಲಿಸಿ ಭಾಗಿನ ಅರ್ಪಸಿದರು.
ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನಲ್ಲಿರುವ ಹಾರಂಗಿ ಜಲಾಶಕ್ಕೆ ಇಂದು ಶಾಸಕ ಮಂತರ್ ಗೌಡ ಭಾಗಿನ ಅರ್ಪಸಿದರು. ಕಾವೇರಿ ತೀರ್ಥೋದ್ಭವದ ಬಳಿಕ ಜಲಶಾಕ್ಕೆ ಆಗಮಿಸಿದ ಶಾಸಕ ಮಂತರ್ ಗೌಡ ಅವರು, ಮೊದಲು ಜಲಾಶಯದ ಬಳಿ ಇರೋ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಬಾಗಿನವನ್ನ ವಾಲಗದ ಮೂಲಕ ಮೆರವಣಿಗೆಯಲ್ಲಿ ತೆರಳಿ ಜಲಾಶಕ್ಕೆ ತಂದು ಬಾಗಿನ ಅರ್ಪಿಸಿದರು. ಜೊತೆಗೆ ನಾಡಿಗೆ ಒಳ್ಳೆಯ ಮಳೆ ಬೆಳೆಗಳಾಗಿ, ನಾಡು ಸುಭಿಕ್ಷೆಯಿಂದ ಇರಲೆಂದು ದೇವರಲ್ಲಿ ಮೊರೆ ಇಟ್ಟರು. ಶಾಸಕರಿಗೆ ಜಲಾಶಯ ಅಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು.
Kshetra Samachara
18/10/2024 04:49 pm