ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋದ ಬಾಲಕ

ಬೆಳಗಾವಿ : ಗೋಕಾಕ ನಗರದ ಮಾರ್ಕಂಡೇಯ ನದಿಯ ತಿರದ ಹೆಜ್ಜೆಗಾರ ಹೊಲದ ಹತ್ತಿರ ನೀರು ಕುಡಿಯಲು ಹೋಗಿದ್ದ ಬಾಲಕ ಕಾಲುಜಾರಿ ಹರಿಯುತ್ತಿರುವ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ‌.

ಸಾಗರ ಗೌಳಿ (16) ಬಾಲಕ ಎಂದು ಗುರುತಿಸಲಾಗಿದೆ. ರವಿವಾರ ದಿನ ಮದ್ಯಾಹ್ನ: 3-30ಕ್ಕೆ ಈ ಘಟನೆ ನಡೆದಿದೆ.‌ ಸುದ್ದಿ ತಿಳಿದ ತಕ್ಷಣ ಗೋಕಾಕ ಪಿಎಸ್ಐ ಕೆ ವಾಲಿಕಾರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಗೋಕಾಕ್ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧ ನಡೆಸಿದ್ದಾರೆ. ತಹಸೀಲ್ದಾರ್ ಡಾಮ ಭಸ್ಮೆ ಕೂಡಾ ಸ್ಥಳದಲ್ಲಿ ಇದ್ದು, ನಿನ್ನೆಯಿಂದಲೇ ಶೋಧಕಾರ್ಯ ನಡೆಯುತ್ತಿದೆ.‌ ಬಾಲಕ ನದಿಯಲ್ಲಿ ಕೊಚ್ಚಿ ಹೋಗಿರುವ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Edited By : Vinayak Patil
PublicNext

PublicNext

14/10/2024 01:49 pm

Cinque Terre

20.64 K

Cinque Terre

1

ಸಂಬಂಧಿತ ಸುದ್ದಿ