ದಾವಣಗೆರೆ: ಜಗಳೂರು ಕೆರೆ ತುಂಬಿದ್ದಕ್ಕೆ ಶಾಸಕ ಬಿ ದೇವೇಂದ್ರಪ್ಪ ಸಖತ್ ಡ್ಯಾನ್ಸ್ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು ಕೆರೆಯ ಮುಂಭಾಗ ಜಮಾಯಿಸಿದ ಸಾವಿರಾರು ಜನರು ಕೆರೆ ತುಂಬಿ ಕೋಡಿ ಬಿದ್ದಿದ್ದಕ್ಕೆ ಕುಣಿದು ಕುಪ್ಪಳಿಸಿದ್ರು. ಜನರ ಜೊತೆ ಶಾಸಕ ಬಿ ದೇವೇಂದ್ರಪ್ಪ ಹೆಜ್ಜೆ ಹಾಕಿ ಸಂಭ್ರಮಸಿದರು.
ಮಳೆಯ ಜೊತೆ 57 ಕೆರೆ ತುಂಬಿಸುವ ಯೋಜನೆಯಿಂದಲೂ ಕೆರೆ ನೀರು ತುಂಬಿದೆ. ಬರದ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಗಳೂರು ಈಗ ಸಮೃದ್ಧಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
PublicNext
12/10/2024 07:25 pm