ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುನಿರತ್ನ ವಿರುದ್ಧ ಸಿಡಿದೆದ್ದ ಕೈ ಒಕ್ಕಲಿಗರು; ಸಿಎಂ ಭೇಟಿ ಮಾಡಿ SIT ಮೂಲಕ ತನಿಖೆಗೆ ಒತ್ತಾಯಿಸಲು ನಿರ್ಧಾರ

ಬೆಂಗಳೂರು: ಒಕ್ಕಲಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತನಾಡಿದ್ದ ಶಾಸಕ‌ ಮುನಿರತ್ನ ವಿರುದ್ಧ ಕಾಂಗ್ರೆಸ್ ಒಕ್ಕಲಿಗ ಮುಖಂಡರು ಸಿಡಿದೆದಿದ್ದಾರೆ. ನಿನ್ನೆ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ತಡರಾತ್ರಿಯ ತನಕ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಕೈ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಸಚಿವರಾದ ಸುಧಾಕರ್, ವೆಂಕಟೇಶ್, ಕೃಷ್ಣಬೈರೇಗೌಡ ಟಿ.ಬಿ. ಜಯಚಂದ್ರ, ಶಿವಲಿಂಗೇಗೌಡ, ಬಾಲಕೃಷ್ಣ, ಶರತ್ ಬಚ್ಚೇಗೌಡ, ರಮೇಶ್ ಬಾಬು, ನಂಜೇಗೌಡ ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದರು.

ಸಭೆಯಲ್ಲಿ ಮುನಿರತ್ನ ವಿರುದ್ಧ ಹೋರಾಟದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಮುನಿರತ್ನ ಪ್ರಕರಣವನ್ನ ಎಸ್ ಐಟಿ ಮೂಲಕ ತನಿಖೆ ನಡೆಸಲು ಕಾಂಗ್ರೆಸ್ ಒಕ್ಕಲಿಗ ನಾಯಕರ ಸಭೆಯಲ್ಲಿ ತೀರ್ಮಾನಿಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಎಸ್.ಐ. ಟಿ ತನಿಖೆಗೆ ಒತ್ತಾಯ ಮಾಡಲು ನಿರ್ಧಾರ ಮಾಡಲಾಗಿದೆ. ಜಾತಿ ನಿಂದನೆ ಸೇರಿದಂತೆ ಯಾವೆಲ್ಲ ಪ್ರಕರಣ ಮುನಿರತ್ನ ವಿರುದ್ಧ ದಾಖಲೆ ಆಗಿವೆ. ಆ ಎಲ್ಲ ಪ್ರಕರಣಗಳ ಕುರಿತು ಎಸ್.ಐ.ಟಿ ಮೂಲಕ ಉನ್ನತಮಟ್ಟದ ತನಿಖೆಗೆ ನಡೆಸುವಂತೆ ಸಿಎಂಗೆ ನಿಯೋಗ ಒತ್ತಾಯಿಸಲಿದೆ.

Edited By : Vijay Kumar
PublicNext

PublicNext

20/09/2024 07:58 am

Cinque Terre

56.33 K

Cinque Terre

0

ಸಂಬಂಧಿತ ಸುದ್ದಿ