ಯಾದಗಿರಿ : ಯಾದಗಿರಿ ಜಿಲ್ಲೆಯ ನೆರೆಯ ವಿಜಯಪೂರದಿಂದ ಪ್ರತಿಷ್ಠಿತ ಕಂಪನಿಗಳ ಹೆಸರಿನ ಕೀಟನಾಶಕ ಔಷದಿ ಹಾಗೂ ಗೊಬ್ಬರವನ್ನು ತೆಗೆದುಕೊಂಡು ಹೋಗುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ ರೈತರ ಬೆಳೆಗೆ ಬೇಕಾದ ಕ್ರೀಮಿನಾಶಕವನ್ನು ನಕಲಿ ಔಷದಿ ರೈತರಿಗೆ ವಂಚಿಸಿಸಲು ಹೊರಟಿದ್ದ ಖದೀಮರನ್ನು ಬಂದಿಸಿದ್ದಾರೆ.
ಯಾದಗಿರಿಯ ಸುರಪುರ ತಾಲೂಕಿನ ನಡಿಹಾಳ ಗ್ರಾಮದ ಬಳಿ ಪತ್ತೆಯಾಗಿದೆ ಆರೋಪಿಗಳಿಂದ 5 ಲಕ್ಷ ಮೌಲ್ಯದ ನಕಲಿ ಕ್ರೀಮಿನಾಶಕವನ್ನು ವಿಜಯಪುರದ ಸಿಂದಗಿಯಿಂದ ಯಾದಗಿರಿಯ ಶಹಾಪೂರದ ಮಾರಾಟಗಾರರಿಗೆ ತೆಗೆದುಕೊಂಡು ಹೋಗುವಾಗ ಗೋಗಿ ಪೊಲೀಸ್ ಠಾಣೆಯ ಪಿಎಸ್ ಐ ದೇವಿಂದ್ರರಡ್ಡಿ ನೇತೃತ್ವದಲ್ಲಿ ದಾಳಿ ಮಾಡಿ ಮಾಡಿ ಬಂದಿಸಿದ್ದಾರೆ. ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
22/10/2024 02:36 pm