ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅನ್ನಭಾಗ್ಯಕ್ಕೆ ಸರ್ವರ್ ಸಮಸ್ಯೆ ಅಕ್ಕಿ ಸಿಗದೆ ಜನತೆ ಹೈರಾಣ

ಕುಂದಗೋಳ : ಅನ್ನಭಾಗ್ಯದ ಅಕ್ಕಿ ಪಡೆಯಲು ಫಲಾನುಭವಿಗಳು ಸರ್ವರ್ ಸಮಸ್ಯೆಯಿಂದ ದಿನಗಟ್ಟಲೇ ಕಾಯುವ ಅನಿವಾರ್ಯ ದುಸ್ಥಿತಿ ಎಲ್ಲೇಡೆ ನಿರ್ಮಾಣವಾಗಿದೆ.

ಹೌದು ! ಪ್ರತಿ ತಿಂಗಳು ಅನ್ನಭಾಗ್ಯದ ಪಡಿತರ ಅಕ್ಕಿ ಪಡೆಯಲು ಹೆಬ್ಬೆಟ್ಟು ನೀಡಿ ರೇಷನ್ ಪಡೆಯಬೇಕು, ಆದರೆ, ಕಳೆದ ಹಲವು ದಿನಗಳಿಂದ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ಸೇವಾ ವ್ಯವಹಾರಗಳ ಇಲಾಖೆ ಸರ್ವರ್ ತಾಂತ್ರಿಕ ದೋಷದಿಂದ ಈ ಪ್ರಕ್ರಿಯೆ ಜಟಿಲವಾಗಿ ಜನ ಗಂಟೆ ಗಟ್ಟಲೇ ಕಾಯುವ ಸಮಸ್ಯೆ ತಲೆ ದೋರಿದೆ.

ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಜನರು ಕೂಲಿ ನಾಲಿ ಬಿಟ್ಟು ರೇಷನ್ ಪಡೆಯಲು ಬಂದು ಸರ್ವರ್ ಸಮಸ್ಯೆ ಕಾರಣ ನ್ಯಾಯಬೆಲೆ ಅಂಗಡಿ ಮಾಲೀಕರ ಜೊತೆ ವಾಗ್ವಾದ ಮಾಡಿದ ಪ್ರಸಂಗ ಸಹ ನಡೆದಿವೆ.

ಪ್ರಸ್ತುತ ಕೆಲವರು ಮನೆಯಲ್ಲಿ ರೇಷನ್ ಖಾಲಿಯಾಗಿ ಇತ್ತ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದ ರೇಷನ್ ಸಿಗದೆ ವ್ಯವಸ್ಥೆಗೆ ಶಾಪ ಹಾಕುತ್ತಿದ್ದಾರೆ.

ಒಟ್ಟಾರೆ ಆಹಾರ ಇಲಾಖೆ ಸರ್ವರ್ ಸಮಸ್ಯೆ ಸಾರ್ವಜನಿಕರ ಅನ್ನಭಾಗ್ಯಕ್ಕೆ ಅಡೆತಡೆ ತಂದಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Somashekar
Kshetra Samachara

Kshetra Samachara

22/10/2024 02:46 pm

Cinque Terre

14.84 K

Cinque Terre

3

ಸಂಬಂಧಿತ ಸುದ್ದಿ