ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಹಿರೇಮಲ್ಲನಹೊಳೆ ಗ್ರಾಮ ಕೆರೆ ಭರ್ತಿ- 40 ಮನೆಗಳಿಗೆ ನುಗ್ಗಿದ ನೀರು, ಕಾಳಜಿ ಕೇಂದ್ರಕ್ಕೆ ಜನ ಸ್ಥಳಾಂತರ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ನಿರಂತರ ಮಳೆ ಮುಂದುವರೆದಿದೆ. ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆ ತುಂಬಿದ್ದು, ಕೆರೆ ಅಂಗಳದಲ್ಲಿ‌ ನಿರ್ಮಿಸಿದ 40 ಮನೆಗಳಿಗೂ ನೀರು ನುಗ್ಗಿದೆ.

ಕಂಗಾಲಾದ ಕುಟುಂಬಗಳು ಗ್ರಾಮದ ಸರ್ಕಾರಿ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದು, 66 ಮಹಿಳೆಯರು, 35 ಮಕ್ಕಳು ಸಹಿತ 200 ಜನರಿಗೆ ಕಾಳಜಿ ಕೇಂದ್ರ ಆಸರೆ ಒದಗಿಸಿದೆ.

ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ ಹಾಗೂ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಭೇಟಿ ನೀಡಿ‌, ಸ್ಥಳೀಯರಿಗೆ ಬೇರೆ ಕಡೆ ಒಂದು ಎಕರೆ ಜಮೀನಲ್ಲಿ ವಸತಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

Edited By : Shivu K
PublicNext

PublicNext

17/10/2024 03:52 pm

Cinque Terre

24.77 K

Cinque Terre

0

ಸಂಬಂಧಿತ ಸುದ್ದಿ