ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಸುರಿಯುತ್ತಿರುವ ಭಾರೀ ಮಳೆಗೆ ನೂರಾರು ಮನೆಗಳು ಮುಳುಗಡೆ

ದಾವಣಗೆರೆ : ದಾವಣಗೆರೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ನೂರಾರು ಮನೆಗಳು ಮುಳುಗಡೆಯಾಗಿವೆ. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಬೆಂಕಿ ನಗರ, ಕಾಳಿದಾಸ್ ನಗರ ಮುಳುಗಡೆಯಾಗಿದೆ.

ಕಾಲುವೆ ನೀರು ಹೆಚ್ಚಾಗಿ ವಸತಿ ಪ್ರದೇಶದೊಳಗೆ ನೀರು ನುಗ್ಗಿ ನೂರಾರು ಮನೆಗಳು ಜಲಾವೃತವಾಗಿವೆ. ಮನೆಯಲ್ಲಿದ್ದ ಸಾಮಗ್ರಿಗಳು ಮುಳುಗಡೆಯಾಗಿದೆ. ನದಿಯೋ ಇಲ್ಲ ವಸತಿ ಪ್ರದೇಶವೋ ಎಂದು ಅನುಮಾನ ಬರುವಂತಿದೆ ಕಾಳಿದಾಸ ನಗರ. ಜನಪ್ರತಿನಿಧಿಗಳಾಗಿ, ಅಧಿಕಾರಿಗಳಾಗಲೀ ಇತ್ತ ಭೇಟಿ ನೀಡಿಲ್ಲ. ಕಾಲುವೆಗೆ ತಡೆಗೋಡೆ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರೂ ಸ್ಪಂದಿಸದ ಅಧಿಕಾರಿಗಳಿಗೆ ಶಾಪ ಹಾಕಿದ್ದಾರೆ.

ತಡೆಗೋಡೆ ನಿರ್ಮಾಣ ಮಾಡಿದರೆ ಇಷ್ಟೆಲ್ಲ ಅವಾಂತರ ಸೃಷ್ಟಿಯಾಗುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮೊಣಕಾಲುದ್ದ ನೀರಿನಲ್ಲೇ ರಾತ್ರಿಯಿಂದ ಜನರು ಕಾಲ ಕಳೆಯುತ್ತಿದ್ದಾರೆ. ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಗಳು ನೀರಿನಲ್ಲಿ ಮುಳುಗಿವೆ. ನಿರಂತರ ಮಳೆಗೆ ದಾವಣಗೆರೆ ‌ಹರಿಹರ ಹಳೇ ಪಿಬಿ ರಸ್ತೆಗಳ‌ ಮನೆಗಳಿಗೆ ‌ನೀರು ನುಗ್ಗಿದೆ. ಅಗ್ನಿ ಶಾಮಕ‌ದಳ ಸಿಬ್ಬಂದಿಯಿಂದ ನೀರು ಹೊರ ಹಾಕುವ ಕಾರ್ಯ ನಡೆಯುತ್ತಿದೆ.

Edited By : Shivu K
PublicNext

PublicNext

17/10/2024 02:37 pm

Cinque Terre

19.2 K

Cinque Terre

0

ಸಂಬಂಧಿತ ಸುದ್ದಿ