ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಮಾದಪ್ಪನ ಭಕ್ತರ ಕಂಡು ದೌಡಾಯಿಸಿದ ಗಜರಾಜ

ಚಾಮರಾಜನಗರ: ಪವಾಡ ಪುರುಷ ಮಾದಪ್ಪನ‌ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತಾಳೆಬೆಟ್ಟ ಸಮೀಪದ ಬರುತ್ತಿದ್ದ ಭಕ್ತರನ್ನು ಕಂಡ ಆನೆಯೊಂದು ಕಾಡಿನೊಳಗೆ ದೌಡಾಯಿಸಿದ ಪ್ರಸಂಗ ಕಂಡು ಬಂತು.

ಹನೂರು ತಾಲೂಕಿನ ಮಹದೇಶ್ವರಬೆಟ್ಟ ಹಾಗೂ ತಾಳಬೆಟ್ಟ ಮಾರ್ಗ ಮಧ್ಯದ ಸೇತುವೆವೊಂದರ ಬಳಿ ಕಾಡಿನಿಂದ ಆಗಮಿಸಿದ್ದ ಕಾಡಾನೆಯೂ‌ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದ ಭಕ್ತರ ಹಿಂಡನ್ನು ಕಂಡೊಡನೆಯೇ ಭಕ್ತರ ಶಬ್ದಕ್ಕೆ ಗಾಬರಿಗೊಂಡು ಬಂದ ದಾರಿಗೆ ಶುಂಕವಿಲ್ಲ ಎನ್ನುವಂತೆ ಮತ್ತೆ ಕಾಡಿನೊಳಗೆ ದೌಡಾಯಿಸಿತು.

 

Edited By : PublicNext Desk
Kshetra Samachara

Kshetra Samachara

12/10/2024 06:34 pm

Cinque Terre

4.22 K

Cinque Terre

0