ರಬಕವಿ-ಬನಹಟ್ಟಿ:
ತೇರದಾಳದಲ್ಲಿ ಶನಿವಾರವೂ ಮುಂದುವರೆದ ಪ್ರಭು ಪರಂ ಜ್ಯೋತಿ ಪಾದಯಾತ್ರೆ ನಂತರ ಶೇಗುಣಸಿ ಮಹಾಂತದೇವರಿಂದ ಪಟ್ಟಣದಲ್ಲಿ ರುದ್ರಾಕ್ಷಿ ದೀಕ್ಷೆ ನಡೆಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತರು ಶ್ರೀಗಳಿಂದ ರುದ್ರಾಕ್ಷಿ ಧಾರಣೆ ಮಾಡಿದರು. ಚಿಮ್ಮಡದ ಪ್ರಭು ಸ್ವಾಮೀಜಿ ಇದ್ದರು. ಅಲ್ಲಮಪ್ರಭು ನೂತನ ದೇವಸ್ಥಾನ ಕಟ್ಟಡ ಲೊಕಾರ್ಪಣೆ ಹಿನ್ನೆಲೆ ಕೈಗೊಂಡ ಪ್ರತಿದಿನದ ಪಾದಯಾತ್ರೆಗೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ. ದಾರಿಯುದ್ದಕ್ಕೂ ಹೂಮಳೆಗರೆದು, ಆರುತಿ ಬೆಳಗುವ ಮುತ್ತೈದೆಯರು ಅಜ್ಜನವರ ಜ್ಯೋತಿ ದರ್ಶನ ಯಾತ್ರೆಗೆ ಬಾರಿ ಬೆಂಬಲ ನೀಡುತ್ತಿದ್ದಾರೆ. ಸಂಜೆ ನಡೆಯುವ ಶರಣ ಚಿಂತನ ಪ್ರವಚನಕ್ಕೂ ಭಕ್ತರ ದಂಡು ಹರಿದುಬರುತ್ತಿದೆ.
Kshetra Samachara
19/10/2024 04:46 pm