ರಬಕವಿ-ಬನಹಟ್ಟಿ: ಕೆಎಚ್.ಡಿಸಿ ಕಾಲನಿಯ ನಿವಾಸಿಗಳು ಕಳೆದ 37 ವರ್ಷಗಳಿಂದ ವಾಸವಿದ್ದರೂ ಕೂಡ ಸಿಟಿಎಸ್ ಉತಾರೆ ಇಲ್ಲದೆ ಅತಂತ್ರ ಜೀವನ ಕಳೆಯುತ್ತಿದ್ದಾರೆ.
ಕೆಎಚ್.ಡಿಸಿ ನಿಗಮ, ಜವಳಿ ಇಲಾಖೆ ಹಾಗೂ ಸಹಕಾರಿ ಸಂಘಗಳಲ್ಲಿ ನೇಕಾರರ ಹೆಸರಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿ ಬನಹಟ್ಟಿ ನಗರದ ಕೆಎಚ್.ಡಿಸಿ ಯಿಂದ ಪ್ರತಿಭಟನಾ ಪಾದಯಾತ್ರೆಯು ಭಾನುವಾರ ಮಧ್ಯಾಹ್ನ ಹೊರಟಿತು. ಬೆಳಗಾವಿ ಮಾರ್ಗವಾಗಿ ಹುಬ್ಬಳ್ಳಿವರೆಗೆ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ನೇತೃತ್ವದಲ್ಲಿ ಅನೇಕ ನೇಕಾರರು ಭಾಗಿಯಾಗಿದ್ದರು.
PublicNext
13/10/2024 03:53 pm