ರಬಕವಿ-ಬನಹಟ್ಟಿ : ತೇರದಾಳ ಪಟ್ಟಣದ ವಿಶೇಷ ತಹಶಿಲ್ದಾರ ಕಚೇರಿ ಮುಂಭಾಗದಲ್ಲಿರುವ ವಿದ್ಯುತ್ ಟ್ರಾನ್ಸಫರ್ಮರ್ ಗೆ ಶುಕ್ರವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಕೆಲಹೊತ್ತು ಭಯದ ವಾತಾವರಣ ನಿರ್ಮಾಣವಾಯಿತು.
ಜನನಿಬಿಡ ಪ್ರದೇಶದಲ್ಲಿ ಆದ ಘಟನೆ ಇದಾಗಿದ್ದು, ವಿಜಯದಶಮಿ ಹಿನ್ನೆಲೆ ಕಚೇರಿ ಬಂದ್ ಇರುವುದರಿಂದ ಪಕ್ಕದ ಅಂಗಡಿಗಳು ಕೂಡ ಬಂದಾಗಿದ್ದವು. ಹೀಗಾಗಿ ಯಾವುದೇ ಅವಘಡ ಸಂಭವಿಸಿರುವುದಿಲ್ಲ. ಮಾಹಿತಿ ತಿಳಿದ ತಕ್ಷಣ ಹೆಸ್ಕಾಂ ಸಿಬ್ಬಂದಿ ರಿಪೇರಿ ಕಾರ್ಯವನ್ನು ಕೈಗೊಂಡರು.
Kshetra Samachara
11/10/2024 03:06 pm