ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರೈತರ ಹೊಲಗಳಿಗೆ ಭೇಟಿ: ಸಚಿವರಿಂದ ಬೆಳೆ ವೀಕ್ಷಣೆ

ಧಾರವಾಡ: ಬೆಳೆ ಹಾನಿ ವೀಕ್ಷಣೆಗೆಂದು ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮಕ್ಕೆ ಬಂದಿದ್ದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬೆಳೆ ವೀಕ್ಷಣೆ ನಂತರ ಅಮ್ಮಿನಬಾವಿ ಗ್ರಾಮದ ಬಸ್ ನಿಲ್ದಾಣದಲ್ಲಿದ್ದ ಚಹಾ ಅಂಗಡಿಯಲ್ಲಿ ಸಾಮಾನ್ಯರಂತೆ ಮಿರ್ಚಿ ಹಾಗೂ ಗಿರಮಿಟ್ ಸವಿದಿದ್ದಾರೆ. ಸಚಿವರೊಂದಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಓ ಸ್ವರೂಪಾ ಟಿ.ಕೆ. ಅವರೂ ಗಿರಮಿಟ್ ಹಾಗೂ ಮಿರ್ಚಿ ರುಚಿ ಸವಿದಿದ್ದಾರೆ.

ಅಮ್ಮಿನಬಾವಿ ಗ್ರಾಮದ ವಿವಿಧ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದ ಸಚಿವರು, ಮಳೆಯಿಂದ ಹಾನಿಗೀಡಾದ ಮನೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆಯಿಂದಾದ ಹಾನಿಯನ್ನು ವೀಕ್ಷಣೆ ಮಾಡಿ ವಾಪಸ್ ಧಾರವಾಡದತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಬಸ್ ನಿಲ್ದಾಣದ ಬಳಿ ಚಹಾ ಅಂಗಡಿ ನೋಡಿ ವಾಹನ ನಿಲ್ಲಿಸಿದ ಸಚಿವರು ಅಲ್ಲಿ ಅಧಿಕಾರಿಗಳೊಂದಿಗೆ ಸಾಮಾನ್ಯರಂತೆ ಮಿರ್ಚಿ ಹಾಗೂ ಗಿರಮಿಟ್ ರುಚಿ ಸವಿದು ಎಲ್ಲರ ಗಮನಸೆಳೆದರು.

Edited By : Manjunath H D
Kshetra Samachara

Kshetra Samachara

22/10/2024 10:18 pm

Cinque Terre

4.65 K

Cinque Terre

0

ಸಂಬಂಧಿತ ಸುದ್ದಿ