ಮಂಡ್ಯ; ಅಕ್ರಮವಾಗಿ ನಡೆಯುತ್ತಿದ್ದ ಹುಕ್ಕಾ ಬಾರ್ ನಲ್ಲಿ ಅಪ್ರಾಪ್ತರಿಗೆ ಹುಕ್ಕಾ ಸೇದಲು ಅವಕಾಶ ಮಾಡಿ ಕೊಟ್ಟ ಪರಿಣಾಮ, ಹುಕ್ಕಾ ಸೇದಲು ಹಣವಿಲ್ಲದಿದ್ದಾಗ ಹುಕ್ಕಾ ಬಾರ್ ಗೆ ನುಗ್ಗಿ ಕಳವು ಮಾಡಿರುವ ಘಟನೆ ಮಂಡ್ಯದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಳೇ ಬೂದನೂರು ಗ್ರಾಮದಲ್ಲಿ ಜರುಗಿದೆ.
ಬೂದನೂರು ಗ್ರಾಮದಲ್ಲಿ ಬಲು ದಿನಗಳಿಂದ ಹುಕ್ಕಾ ಬಾರ್ ನಡೆಯುತ್ತಿದ್ದು ಜಿಲ್ಲಾಡಳಿತ ಬ್ಯಾನ್ ಮಾಡಿದ್ದರೂ ಅನಧಿಕೃತವಾಗಿ ನಡೆಯುತ್ತಿತ್ತು. ಸಂಜೆಯಾಯಿತೆಂದರೆ ಸಾಕು ಹುಕ್ಕಾ ಪ್ರೇಮಿಗಳು ಬೆಂಗಳೂರು ಮೈಸೂರಿನಿಂದ ಬಂದು ಹುಕ್ಕಾ ಹೊಡೆದು ಹೋಗುವುದು ಸಾಮಾನ್ಯವಾಗಿತ್ತು.
ಆದ್ರೆ ಇತ್ತೀಚೆಗೆ ಅಪ್ರಾಪ್ತ ಬಾಲಕರು ಹಾಡಹಗಲೇ ಹುಕ್ಕಾ ಚಟಕ್ಕೆ ದಾಸರಾಗಿದ್ದರು. ಅಲ್ಲಿ ಇಲ್ಲಿ ಹಣ ಹೊಂಚಿ ತಂದು ಚಟ ತೀರಿಸಿಕೊಳ್ಳುತ್ತಿದ್ದ ಹುಡುಗರು ಹಣ ಸಿಗದಿದ್ದಾಗ ಹುಕ್ಕಾ ಬಾರ್ ಗೆ ಅನಧಿಕೃತವಾಗಿ ಪ್ರವೇಶ ಮಾಡಿ ಒಳಗಿದ್ದ ಹುಕ್ಕಾ ಹೂಜಿ ಮತ್ತು ಅದಕ್ಕೆ ಬಳಸುವ ಮಾದಕ ವಸ್ತುಗಳನ್ನ ಕದ್ದಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿ.ಸಿ.ಟಿ.ವಿ.ಯಲ್ಲಿ ಸೆರೆಯಾಗಿದೆ.
ಊರೆಲ್ಲಾ ಸೂರೆ ಹೊದ ಮೇಲೆ ಕೋಟೆ ಬಾಗಿಲು ಹಾಕಿದಂತೆ ಈಗ ಮಕ್ಕಳ ರಕ್ಷಣಾ ಸಮಿತಿ ಜಿಲ್ಲಾಡಳಿತ ಸ್ಥಳಕ್ಕೆ ಹೋಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯನೋರ್ವ ದಂಧೆಯಲ್ಲಿ ನೇರವಾಗಿ ಭಾಗಿಯಾಗಿರೋದು ಎದ್ದು ಕಾಣುತ್ತಿದ್ದು ಗ್ರಾಮಾಂತರ ಪೊಲೀಸರು ಬೂದನೂರು ಗ್ರಾಮ ಪಂಚಾಯಿತಿ ಪಿ.ಡಿ.ಓ. ಜಾಣ ಕುರುಡು ಅಪ್ರಾಪ್ತ ಹುಡುಗರು ಮಾದಕ ವಸ್ತುಗಳ ದಾಸರಾಗುವಂತೆ ಮಾಡಿದೆ.
PublicNext
21/10/2024 07:16 pm