ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಮರಾಜನಗರ: ಜೀವದ ಹಂಗು ತೊರೆದು ವಿದ್ಯುತ್ ತಂತಿ ದುರಸ್ತಿಪಡಿಸಿದ ಲೈನ್ ಮ್ಯಾನ್

ಚಾಮರಾಜನಗರ : ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಕಬ್ಬಹಳ್ಳಿ ಶಾಖೆ ವ್ಯಾಪ್ತಿಗೆ ಬರುವ ಪರ್ವತನಪುರ ಕಮ್ಮಾರನ ಕಟ್ಟೆಕೆರೆಯ ನಡುವೆ ಹಾದು ಹೋಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಲೈನ್ ಮ್ಯಾನ್ ಒಬ್ಬ ಜೀವದ ಹಂಗು ತೊರೆದು ದುರಸ್ತಿಗೊಳಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪರ್ವತನಪುರ ಗ್ರಾಮಕ್ಕೆ ವಿದ್ಯುತ್ ಪೂರೈಸಲು ಕೆರೆಯ ಒಳಗೆ ವಿದ್ಯುತ್ ತಂತಿ ಸಂಪರ್ಕ ಕಲ್ಪಿಸಲಾಗಿತ್ತು. ವಿದ್ಯುತ್ ತಂತಿ ತುಂಡಾದ ಕಾರಣ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾಗಿತ್ತು. ಇದನ್ನು ಮನಗಂಡ ಲೈನ್ ಮ್ಯಾನ್ ಮಹೇಶ್ ದುರಸ್ತಿಗೆ ಮುಂದಾದರು.

ದುರಸ್ಥಿಗೆ ಮುಂದಾದ ಲೈನ್ ಮ್ಯಾನ್ ಮಹೇಶ್ ಜೀವದ ಹಂಗು ತೊರೆದು ತುಂಬಿದ ಕೆರೆಯಲ್ಲಿ ಈಜಿಕೊಂಡು ಹೋಗುವ ಮೂಲಕ ಕೆರೆಯ ಮಧ್ಯೆ ಇದ್ದ ವಿದ್ಯುತ್ ಕಂಬವನ್ನು ಏರಿ ತಂತಿಯನ್ನು ಜೋಡಿಸಿ ದುರಸ್ತಿಗೊಳಿಸಿದ್ದಾರೆ. ಮಹೇಶ್ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Ashok M
PublicNext

PublicNext

20/10/2024 09:21 am

Cinque Terre

27.06 K

Cinque Terre

2