ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ನದಿಗೆ ಹಾರಿದ ವ್ಯಕ್ತಿ ದೃಶ್ಯ ಮೊಬೈಲ್ ನಲ್ಲಿ ಸೆರೆ- ಹರಸಾಹಸ ಪಟ್ಟು ರಕ್ಷಣೆ ಮಾಡಿದ ಸ್ಥಳೀಯರು

ನಾಪೋಕ್ಲು: ಸಮೀಪದ ಬಲಮುರಿ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ನಡೆದ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಭಕ್ತರೊಬ್ಬರು ಬಲಮುರಿ ಸಣ್ಣ ಸೇತುವೆ ಮೇಲಿಂದ ನದಿಗೆ ಹಾರುವ ದೃಶ್ಯ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರಿಯಾಗಿದೆ.

ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬಡಿಕೇರಿ ಗ್ರಾಮದ ನಿವಾಸಿ ವಾಸು ಎಂಬುವವರೇ ನದಿಗೆ ಹಾರಿದ ವ್ಯಕ್ತಿಯಾಗಿದ್ದಾರೆ. ಅಗಸ್ತೇಶ್ವರ ದೇವಾಲಯದಲ್ಲಿ ಕಾವೇರಿ ಜಾತ್ರೆ ನಡೆಯುತ್ತಿತ್ತು. ಜಾತ್ರೆಗೆ ಬಂದಿದ್ದ ವಾಸು ಎಂಬುವವರು ಇತರರೊಂದಿಗೆ ಸೇತುವೆ ಮೇಲೆ ನಡೆದುಕೊಂಡು ಬರುತ್ತಿದ್ದರು. ಇದೇ ವೇಳೆ ವಾಸು ಏಕಾಏಕಿ ನದಿಗೆ ಹಾರುವ ದೃಶ್ಯ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ಇದೇ ಸೇತುವೆ ಮೇಲೆ ವಾಹನವೊಂದು ಮರುಭಾಗದಿಂದ ಬರುವ ಸಂದರ್ಭ ಆಯತಪ್ಪಿ ವಾಸು ನದಿಗೆ ಬಿದ್ದಿದ್ದಾರೆ ಎನ್ನಲಾಗಿತ್ತು. ಆದರೆ ಇವರು ಸೇತುವೆ ಮೇಲೆಯಿಂದ ನದಿಗೆ ಹಾರುವ ದೃಶ್ಯ ಈಗ ವ್ಯಕ್ತಿಯೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನದಿ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗುತ್ತಿದ್ದ ವಾಸು ಎಂಬವರನ್ನು ಸ್ಥಳೀಯ ನಿವಾಸಿಯೊಬ್ಬರ ಹರಸಹಾಸದಿಂದ ರಕ್ಷಣೆ ಮಾಡಿದ್ದರು. ವಾಸು ಅವರು ನದಿಗೆ ಹಾರಲು ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ.

Edited By : Ashok M
PublicNext

PublicNext

20/10/2024 08:37 am

Cinque Terre

28.98 K

Cinque Terre

0

ಸಂಬಂಧಿತ ಸುದ್ದಿ