ದಾವಣಗೆರೆ : ಲೋಕಾಯುಕ್ತ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚನ್ನಗಿರಿ ತಾಲ್ಲೂಕು ದೇವರಹಳ್ಳಿ ನಾಡಕಛೇರಿ ಉಪ ತಹಶೀಲ್ದಾರ್ ರೆಂಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇನ್ನು ಬೋನೋ ಫೈಡ್ ಪ್ರಮಾಣ ಪತ್ರ ನೀಡಲು ಹಿರೇಗಂಗೂರು ಗ್ರಾಮದ ಕುಮಾರ್ ಎಂಬ ಯುವಕನಿಗೆ 2000 ಲಂಚ ನೀಡುವಂತೆ ಗ್ರೇಡ್ -2 ತಹಶೀಲ್ದಾರ್ ಸುಧಾ ಒತ್ತಾಯಿಸಿದ್ದರಂತೆ. ಇಂದು ಕಚೇರಿಯಲ್ಲಿ ಮುಂಗಡ 500 ರೂಪಾಯಿ ಪಡೆಯುವಾಗ ಲೋಕಾಯುಕ್ತಕ್ಕೆ ಲಾಕ್ ಆಗಿದ್ದಾರೆ.
ಸಾರ್ವಜನಿಕರಿಂದ ನಿತ್ಯ ಲಂಚ ಪಡೆದೇ ಕೆಲಸ ಮಾಡುತ್ತಿದ್ದರೆಂದು ಸುಧಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪೂರೆ ನೇತೃತ್ವದಲ್ಲಿ ದಾಳಿ ನಡೆಸಿ ಉಪ ತಹಶೀಲ್ದಾರ್ ಸುಧಾ ಅವರನ್ನು ರೆಂಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
PublicNext
15/10/2024 07:45 pm