ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತ್ಯಕ್ಕಾಗಿ ಸದಾ ಸಿದ್ಧ ರಾಮ ಇರೋದು ಸತ್ಯಕ್ಕಾಗಿ, ದುಷ್ಟ ಶಕ್ತಿ ಎದರು ಸತ್ಯದ ಜಯ ನವರಾತ್ರಿ ಶುಭಾಶಯದಲ್ಲೂ ರಾಜಕಾರಣ..!

ಬೆಂಗಳೂರು : ರಾಜ್ಯವನ್ನು ವಾಮಮಾರ್ಗಸದಿಂದ ಅಸ್ಥಿರ ಗೊಳಿಸಲು ಪ್ರಯತ್ನ ಪಡುತ್ತಿರುವ ದುಷ್ಟ ಶಕ್ತಿಗಳನ್ನು ತಾಯಿ ಚಾಮುಂಡಿ ನಿಗ್ರಹಿಸಲಿ,ಸತ್ಯಕ್ಕಾಗಿ ಸದಾ ಸಿದ್ಧ ರಾಮ ಇರೋದು ಸತ್ಯಕ್ಕಾಗಿ, ದುಷ್ಟ ಶಕ್ತಿ ಎದರು ಸತ್ಯದ ಜಯ ಎಂಬ ರಾಜ್ಯ ಸರಕಾರದ ಜಾಹೀರಾತು ನವರಾತ್ರಿ ಶುಭಾಶಯದಲ್ಲೂ ರಾಜಕಾರಣ ಎಂಬುವ ರೀತಿಯಾಗಿದೆ ರಾಜ್ಯ ಸರ್ಕಾರದ ಈ ಜಾಹೀರಾತು, ಅಲ್ದೇ ಈ ಜಾಹೀರಾತು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಾಡಿನ ಜನತೆಗೆ ನವರಾತ್ರಿ ಶುಭಾಶಯ ಕೋರಿ ಜಾಹೀರಾತು ನೀಡಿರುವ ರಾಜ್ಯ ಸರ್ಕಾರ,ಜಾಹೀರಾತಿನ ತುಂಬಾ ರಾಜಕಾರಣದ ವಾಸನೆಯದ್ದೇ ಚರ್ಚೆ. ನವರಾತ್ರಿ ಶುಭಾಶಯ ಕೋರಿ ರಾಜ್ಯ ಸರ್ಕಾರ ಜಾಹಿರಾತು ನೀಡಿದ ಆ ಜಾಹಿರಾತಿನಲ್ಲಿ ರಾಜ್ಯವನ್ನು ವಾಮಮಾರ್ಗಸದಿಂದ ಅಸ್ಥಿರ ಗೊಳಿಸಲು ಪ್ರಯತ್ನ ಪಡುತ್ತಿರುವ ದುಷ್ಟ ಶಕ್ತಿಗಳನ್ನು ತಾಯಿ ಚಾಮುಂಡಿ ನಿಗ್ರಹಿಸಲಿ ಹಾಗೂಕೋಮು ಗಲಭೆ, ಸಾಮಾಜಿಕ ಪಿಡುಗು, ಪ್ರಚೋದನೆ, ಅಪಪ್ರಚಾರ, ಶಾಂತಿ ಭಂಗ , ಸುಳ್ಳು ವದಂತಿ ಇವುಗಳ ಬಗ್ಗೆ ಎಚ್ಚರಿಕೆ ಇರಬೇಕು

ಹಾಗೂ ಇವುಗಳನ್ನು ಶಮನ ಮಾಡಬೇಕು ಎಂದು ಪರೋಕ್ಷವಾಗಿ ರಾಜಕೀಯ ವಿರೋಧಿಗಳಿಗೆ ಸಂದೇಶ ರೀತಿ ಭಾಸವಾಗುತ್ತದೆ.

ಅಲ್ದೇ ಪತ್ರಿಕೆ ಗಳಲ್ಲಿ ನವರಾತ್ರಿ ಶುಭಾಶಯ ಕೋರುವ ನೆಪದಲ್ಲಿ ವಿರೋಧಿಗಳಿಗೆ ಸಂದೇಶ ರವಾನಿಸಿರುವ ರೀತಿ ಶುಭಾಶಯ ಕೊರಿರುವುದಕ್ಕೆ ಬಿಜೆಪಿ ಸಹ ಅಕ್ಷೆಪ ವ್ಯಕ್ತಪಡಿಸಿದೆ.

Edited By : Nirmala Aralikatti
PublicNext

PublicNext

11/10/2024 02:43 pm

Cinque Terre

8.63 K

Cinque Terre

0

ಸಂಬಂಧಿತ ಸುದ್ದಿ