ಬೆಂಗಳೂರು : ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆರೋಪಿಗಳಿಗೆ ನೋಟಿಸ್ ಕೊಡೋಕೆ ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ , ಸಿಎಂ ಸಿದ್ದು ಕುರಿತ ವ್ಯಂಗ್ಯ ಹಾಡಿನ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಸಿದ್ದರಾಮಯ್ಯ ಧ್ವನಿಯನ್ನ ಅನುಕರಣೆ ಮಾಡಿ ಹಾಡನ್ನ ರೆಕಾರ್ಡ್ ಮಾಡಲಾಗಿದೆ. "ಮುಡಾದ ಸೈಟಿಗೆ ಹಂಬಲಿಸಿತು ಮನ' ಎಂಬ ಸಾಲಿನೊಂದಿಗೆ ಹಾಡು ಆರಂಭವಾಗಲಿದೆ. ಸಿದ್ದು ಧ್ವನಿಯನ್ನ ಅನುಸರಿಸಿ ಹಾಡು ರೆಕಾರ್ಡ್ ಮಾಡಲಾಗಿದ್ದು, ಮುಡಾ ಹಗರಣದ ಇಂಚಿಂಚೂ ಮಾಹಿತಿ ಹಾಕಿ ಸಾಹಿತ್ಯ ರಚನೆ ಮಾಡಲಾಗಿದೆ.ಇನ್ನು, ನೆಟ್ಟಿಗರು ಕಮೆಂಟ್ಸ್ ಮೂಲಕ ಹಾಡಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ತಿದ್ದಾರೆ.
ಜವರನ ಜಾಗಕ್ಕೆ ಹಂಬಲಿಸಿದ ಮನ, ಶೀಘ್ರದಲ್ಲಿ ಕಂಬಿ ಎಣಿಸುವುದು ಖಚಿತ-ನಿಶ್ಚಿತ-ಖಂಡಿತ!! ಎಂದು ಬಿಜೆಪಿ ತನ್ನ ಪೋಸ್ಟ್ ಗೆ ಕ್ಯಾಪ್ಶನ್ ಹಾಕಿ ಕೇಸರಿಪಡೆ ಟಕ್ಕರ್ ನೀಡಿದೆ.
PublicNext
11/10/2024 08:48 am