ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮುನಿರತ್ನ HIV ಟ್ರ್ಯಾಪ್- ಇದೊಂದು "ಬಯೋಲಾಜಿಕಲ್ ವಾರ್" ಎಂದ ಡಿ.ಕೆ. ಸುರೇಶ್

ಬೆಂಗಳೂರು: ಶಾಸಕ ಮುನಿರತ್ನ HIV ಟ್ರ್ಯಾಪ್ ಮಾಡ್ತಿರೋದು ಇದೊಂದು ತರಹ ಬಯೋಲಾಜಿಕಲ್ ವಾರ್ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. HIV ಇರುವವರನ್ನು ಬಳಸಿಕೊಂಡಿದ್ದಾರೆ. ಒಬ್ಬರಿಂದ ಒಬ್ಬರಿಗೆ ರೋಗ ಹರಡಿಸುವ, ಬಯೋಲಾಜಿಕಲ್ ವಾರ್ ತರಹ ಮಾಡುತ್ತಿದ್ದಾರೆ. ಹೀಗಾಗಿಯೇ ತನಿಖೆಗೆ ಒಂದು ವಿಶೇಷ ತಂಡ ರಚನೆಯಾಗಬೇಕು.

ಯಾರು ಯಾರನ್ನು ಯಾವ ಯಾವ ಸಂದರ್ಭದಲ್ಲಿ ಬಳಸಿಕೊಂಡಿದ್ದಾರೆ? ಯಾವ ಯಾವ ರೀತಿ ಬಳಸಿಕೊಂಡಿದ್ದಾರೆ? ಎಂಬುದು ತನಿಖೆಯಿಂದ ಗೊತ್ತಾಗಬೇಕು. ಯಾರು ಯಾರಿಂದ ಎಚ್ಐವಿ ಟ್ರಾನ್ಸ್ಮಿಷನ್ ಗೆ ಅವಕಾಶ ಮಾಡಿದ್ದಾರೆ ಎಂಬುದನ್ನು ಸುದೀರ್ಘವಾಗಿ ತನಿಖೆ ಮಾಡಬೇಕಾಗುತ್ತೆ. ಸ್ಪೆಷಲ್ ಎಸ್ಐಟಿ ಅಥವಾ ಬೇರೆ ತರಹದ ಒಂದು ತನಿಖೆ ಮಾಡಬೇಕು ಎಂದು ನಿನ್ನೆ ಸಭೆ ಸೇರಿ ಒತ್ತಾಯ ಮಾಡಿದ್ದೇವೆ ಎಂದರು.

Edited By : Manjunath H D
PublicNext

PublicNext

20/09/2024 05:43 pm

Cinque Terre

22.9 K

Cinque Terre

2

ಸಂಬಂಧಿತ ಸುದ್ದಿ