ಬೆಂಗಳೂರು : ಹೆಸರಾಂತ ಹಿರಿಯ ಸಾಹಿತಿ ನಾಡೋಜ ಡಾ. ಹಂ.ಪಾ.ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅಕ್ಟೋಬರ್ 3 ರಿಂದ ಆರಂಭವಾಗಲಿರುವ ನಾಡ ಹಬ್ಬ ಮೈಸೂರು ದಸರಾ 12 ರಂದು ಸಮಾರೋಪಗೊಳ್ಳಲಿದೆ.
ಅಕ್ಟೋಬರ್ 3 ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಲ್ಲಿ ಬೆಳಗ್ಗೆ 9.15 ರಿಂದ 9.45 ರ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. ಈ ಬಾರಿ ಮೈಸೂರು ದಸರಾ ಯಾರು ಉದ್ಘಾಟನೆ ಮಾಡ್ತಾರೆ ಎಂಬ ಕುತೂಹಲ ಇತ್ತು ಸಾಕಷ್ಟು ಹೆಸರುಗಳು ಸಹ ಕೇಳಿಬಂದಿತ್ತು ಅಂತಿಮವಾಗಿ ನಾಡೋಜ ಡಾ. ಹಂ.ಪಾ.ನಾಗರಾಜಯ್ಯವರನ್ನ ಸಿಎಂ ಸಿದ್ದರಾಮಯ್ಯ ಆಯ್ಕೆ ಮಾಡಿದ್ದಾರೆ.
PublicNext
20/09/2024 04:37 pm