ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ಬಹುದೊಡ್ಡ ತಪ್ಪು ಮಾಡಿದೆ : ಐದು ಮೈತ್ರಿ ದೇಶಗಳೊಂದಿಗೆ ಮಾಹಿತಿ ಹಂಚಿಕೊಂಡ ಜಸ್ಟಿನ್ ಟ್ರುಡೊ

ವಾಷಿಂಗ್ಟನ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣ ದಲ್ಲಿ ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವುದಾಗಿ ಕೆನಡಾ ಸರ್ಕಾರ ಹೇಳಿದೆ. ಅದರ ಬೆನ್ನಲ್ಲೇ ಭಾರತ ಕೆನಡಾದಲ್ಲಿರುವ ತನ್ನ ಹೈಕಮಿಷನರ್‌ ಅವರನ್ನು ವಾಪಸ್‌ ಕರೆಸಿಕೊಳ್ಳುವುದಾಗಿ ಸೋಮವಾರ ಹೇಳಿದೆ.

ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ಪಾತ್ರವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಹಿಂದೆ ಆರೋಪಿಸಿದ ನಂತರ, ಭಾರತ ಮತ್ತು ಕೆನಡಾ ನಡುವಿನ ಸಂಬಂಧ ತೀವ್ರ ಬಿಗಡಾಯಿಸಿತ್ತು.

ಭಾರತ ತಪ್ಪು ಮಾಡಿದೆ ಎನ್ನುವ ಮಾಹಿತಿಯನ್ನು ಕೆನಡಾ ತನ್ನ ಐದು ಮುಖ್ಯ ಸಹವರ್ತಿ ದೇಶಗಳೊಂದಿಗೆ ಮುಖ್ಯವಾಗಿ ಅಮೆರಿಕ ಜೊತೆ ಹಂಚಿಕೊಂಡಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ನ ಹತ್ಯೆಗೆ ಸಂಬಂಧಪಟ್ಟ ತನಿಖೆಯಲ್ಲಿ ಭಾರತೀಯ ರಾಯಭಾರಿಯ ಸಂಪರ್ಕವಿದೆ ಎಂಬ ಕೆನಡಾ ಸರ್ಕಾರದ ಆರೋಪಗಳನ್ನು ಬಲವಾಗಿ ನಿರಾಕರಿಸಿದ ನಂತರ ಭಾರತ ಸರ್ಕಾರ, ಕೆನಡಾದಿಂದ ಆರೋಪಕ್ಕೊಳಗಾಗಿರುವ ಅಧಿಕಾರಿ, ಭಾರತದ ಕೆನಡಾ ಹೈ ಕಮಿಷನರ್, ಆರು ಮಂದಿ ಕೆನಡಾ ರಾಯಭಾರಿಗಳನ್ನು ಸೋಮವಾರ ವಜಾಗೊಳಿಸಿತ್ತು.

ಈ ಬೆಳವಣಿಗೆ ನಂತರ ಸುದ್ದಿಗೋಷ್ಠಿ ನಡೆಸಿದ ಜಸ್ಟಿನ್ ಟ್ರುಡೊ, ಈ ಪ್ರಕರಣದಲ್ಲಿ ಆರಂಭದಿಂದಲೂ ನಾವು ನಮ್ಮ ಐದು ಸಹವರ್ತಿ ದೇಶಗಳ ಜೊತೆ ನಿಕಟವಾಗಿ ಕೆಲಸ ಮಾಡಿದ್ದು ವಿಶೇಷವಾಗಿ ಅಮೆರಿಕದ ಜೊತೆಯಾಗಿ ಸಾಗಿದ್ದೇವೆ. ಕಾನೂನುಬಾಹಿರ ಹತ್ಯೆಯ ಪ್ರಯತ್ನಕ್ಕೆ ಸಂಬಂಧಿಸಿದಂತೆ ಅಮೆರಿಕ ಕೂಡ ಭಾರತದಿಂದ ಇದೇ ರೀತಿಯ ವರ್ತನೆ ಅನುಭವಿಸಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಭಾರತದೊಂದಿಗೆ ಸಂಪರ್ಕದಿಂದ ಕೆನಡಾದಲ್ಲಿ ಸಂಭವಿಸುವ ಹಿಂಸಾತ್ಮಕ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ತನಿಖಾ ಪ್ರಯತ್ನಗಳ ಕುರಿತು ಮಾತನಾಡಿ ಕಾನೂನು ಸುವ್ಯವಸ್ಥೆಗಾಗಿ ನಾವು ಒಟ್ಟಾಗಿ ನಿಲ್ಲುವುದರಿಂದ ನಾವು ನಮ್ಮ ಮಿತ್ರರಾಷ್ಟ್ರಗಳೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

ಭಾರತದ ವಿರುದ್ಧದ ಉಗ್ರವಾದ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದಕ್ಕೆ ಟ್ರುಡೊ ಸರ್ಕಾರದ ಬೆಂಬಲಕ್ಕೆ ಪ್ರತಿಕ್ರಿಯೆಯಾಗಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.

ಪ್ರಧಾನಿ ಟ್ರುಡೊ ಅವರ ಭಾರತದ ಮೇಲಿನ ಹಗೆತನವು ಬಹಳ ಹಿಂದಿನಿಂದಲೂ ಸಾಕ್ಷಿಯಾಗಿದೆ ಎಂದು ಸಚಿವಾಲಯ ಹೇಳಿದೆ. 2018 ರಲ್ಲಿ, ವೋಟ್ ಬ್ಯಾಂಕ್‌ನೊಂದಿಗೆ ಒಲವು ಗಳಿಸುವ ಗುರಿಯನ್ನು ಹೊಂದಿದ್ದ ಅವರ ಭಾರತ ಭೇಟಿಯು ಅವರ ಮನಸ್ಥಿತಿಯನ್ನು ತಿಳಿಸುತ್ತದೆ. ಅವರ ನೇತೃತ್ವದ ಸರ್ಕಾರವು ಭಾರತಕ್ಕೆ ಸಂಬಂಧಿಸಿದಂತೆ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿ ಕಾರ್ಯಸೂಚಿಯೊಂದಿಗೆ ಬಹಿರಂಗವಾಗಿ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿದೆ.

ಡಿಸೆಂಬರ್ 2020 ರಲ್ಲಿ ಭಾರತದ ಆಂತರಿಕ ರಾಜಕೀಯದಲ್ಲಿ ಅವರ ಹಸ್ತಕ್ಷೇಪವು ಕೆನಡಾ ಸರ್ಕಾರದ ನಿಲುವನ್ನು ತೋರಿಸುತ್ತದೆ ಎಂದಿದ್ದಾರೆ.

ಈಗಿನ ಪರಿಸ್ಥಿತಿ ಅತ್ಯಂತ ಅನಪೇಕ್ಷಿತವಾಗಿದೆ. ಕೆನಡಿಯನ್ನರು ಅವರ ಸಮುದಾಯಗಳಲ್ಲಿ, ಅವರ ಮನೆಗಳಲ್ಲಿ ಹಿಂಸೆಗೆ ಒಳಗಾಗುವುದನ್ನು ನಾವು ಬಯಸುವುದಿಲ್ಲ, ಭಾರತದೊಂದಿಗಿನ ಸಂಬಂಧಗಳಲ್ಲಿ ಈ ಉದ್ವಿಗ್ನತೆಗಳನ್ನು ಹೊಂದಲು ನಾವು ಬಯಸುವುದಿಲ್ಲ ಎಂದು ಹೇಳಿದರು.

Edited By : Nirmala Aralikatti
PublicNext

PublicNext

15/10/2024 02:16 pm

Cinque Terre

33.04 K

Cinque Terre

0

ಸಂಬಂಧಿತ ಸುದ್ದಿ