ಹುಬ್ಬಳ್ಳಿ: ಸ್ನೇಹಿತರ ಜೊತೆ ಈಜಲು ತೆರಳಿದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ದೇವರಗುಡಿಹಾಳ ಕೆರೆಯಲ್ಲಿ ನಡೆದಿದೆ.
ದೇವರ ಗುಡಿಹಾಳ ಗ್ರಾಮದ ಅಸ್ಲಾಂ ಲಾಡಗಿ (27) ಮೃತಪಟ್ಟ ಯುವಕ. ಈತ ನಿನ್ನೆ ತನ್ನ ನಾಲ್ವರು ಸ್ನೇಹಿತರ ಜೊತೆ ಕೆರೆಗೆ ಈಜಲು ತೆರೆಳಿದ. ಆಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ನಿನ್ನೆ ರಾತ್ರಿಯಾದ ಕಾರಣ ಶವಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ಈಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
4 years ago
Login with Mobile