ಮಂಗಳೂರು: ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಡೆಯೊಡ್ಡಿದ ಘಟನೆ ಮಂಗಳೂರು ನಗರದ ಚಿಲಿಂಬಿ ಸಾಯಿಮಂದಿರದ ಬಳಿ ನಡೆದಿದೆ. ಸಾಯಿ ಮಂದಿರದ ಮುಂದೆ ಪ್ರಚಾರ ನಡೆಸದಂತೆ ವಾಗ್ವಾದ ,ಗಲಾಟೆ ನಡೆದಿದೆ.
ರಾಮನವಮಿ ಅಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ರು. ಈ ವೇಳೆ ಚುನಾವಣೆ ಪ್ರಚಾರಕ್ಕೆ ಮುಂದಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಜೊತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಾಗ್ವಾದ ನಡೆಸಿ ಜೋರಾಗಿ ಹೊಡೆದಾಟಕ್ಕೆ ಮುಂದಾದ ಘಟನೆ ನಡೆಯಿತು. ಕೊನೆಗೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಕಾಂಗ್ರೆಸ್ ನ ಮಿಥುನ್ ರೈ ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಂದಾದ್ರು. ವಾಗ್ವಾದ ತೀವ್ರವಾದಂತೆ ಸ್ಥಳಕ್ಕೆ ಅಗಮಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಗೊಳಿಸಿದ್ದಾರೆ. ಬಳಿಕ ಸ್ಥಳದಿಂದ ಎರಡೂ ಪಕ್ಷದ ಕಾರ್ಯಕರ್ತರು ತೆರಳಿದ್ದಾರೆ.
PublicNext
18/04/2024 06:33 pm