ಶಿಗ್ಗಾವಿ : ಪಟ್ಟಣದ ಐತಿಹಾಸಿಕ ಮೈಲಾರ ಲಿಂಗೇಶ್ವರ ನೂತನ ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಶಾರೋಹಣ ಮತ್ತು ನೂತನ ದೇವಸ್ಥಾನದ ಲೋಕಾರ್ಪಣೆ ನಿಮಿತ್ತ ವಿವಿಧ ದೇವರ ಮೂರ್ತಿಗಳ ಮೆರವಣಿಗೆ ಕಾರ್ಯಕ್ರಮಕ್ಕೆ ವಿರಕ್ತಮಠದ ಸಂಗನಬಸವ ಶ್ರೀಗಳು, ಹಿರೇಮಣಕಟ್ಟಿ ಶ್ರೀಗಳು ಚಾಲನೆ ನೀಡಿದರು.
ಪಟ್ಟಣದ ಗಂಗಿಭಾವಿ ಕ್ರಾಸ್ ನಿಂದ ವಿವಿಧ ವಾದ್ಯಗಳು ಹಾಗೂ ಮಹಿಳೆಯರಿಂದ ಕುಂಭ ಸೇವೆ, ಗೊರವಪ್ಪಗಳ ಸೇವೆ, ತಮಟೆ ವಾದ್ಯಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಸ್ಥಾನಕ್ಕೆ ಪುರ ಪ್ರವೇಶವಾಗಲಿದೆ. ಸದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಚೇತನಸ್ವಾಮಿ ಸೇರಿದಂತೆ ಸಮಿತಿಯ ಅಧ್ಯಕ್ಷ ಸುಭಾಸ್ ಚವ್ಹಾಣ, ಸಂಗಪ್ಪ ಕಂಕನವಾಡ, ಲಿಂಗರಾಜ ಗಾಣಿಗೇರ, ಮಂಜುನಾಥ ಕಟ್ಟಿಮನಿ, ನಿಂಗಪ್ಪ ಇಂಗಳಗಿ, ನಿಂಗಪ್ಪ ಯಲಿಗಾರ,ಮಂಜುನಾಥ ಬ್ಯಾಹಟ್ಟಿ, ಮಾಲತೇಶ ಕಂಕನವಾಡ, ನಿಂಗಪ್ಪ ಯಲವಗಿ, ಮಲ್ಲೇಶಪ್ಪ ಅತ್ತಿಗೇರಿ, ಸೋಮಣ್ಣ ಮತ್ತೂರ, ತಿರಕಪ್ಪ ಅಂದಲಗಿ, ಭರತೇಶ ಬಳಿಗಾರ, ಸುರೇಶ ಯಲಿಗಾರ ಹಾಗೂ ಗದಿಗೆಪ್ಪ ಕೊಡ್ಲಿವಾಡ, ಚನ್ನಪ್ಪ ಯಲಿಗಾರ ಸೇರಿದಂತೆ ಪಕ್ಕೀರಪ್ಪ ಕುಂದೂರ, ರಮೇಶ ವನಹಳ್ಳಿ, ಮುಕ್ತಾರ ತಿಮ್ಮಾಪೂರ, ಚಂದ್ರು ಕೊಡ್ಲಿವಾಡ, ಅಶೋಕ ಕಾಳೆ, ಪರುಶರಾಮ ಕುದರಿ, ಅಶೋಕ ಗಾಣಿಗೇರ, ವಿಶ್ವನಾಥ ಗಾಣಿಗೇರ, ಮಾಲತೇಶ ಯಲವಿಗಿ, ಹನುಮಂತ ಭಾರಂಗಿ, ಅಶೋಕ ಇಂಗಳಗಿ ಸೇರಿದಂತೆ ನೂರಾರು ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
PublicNext
24/01/2025 07:33 pm