ಹಾವೇರಿ : ಕಾರವಾರ ಜಿಲ್ಲೆ ಯಲ್ಲಾಪುರ ತಾಲೂಕು ಅರೇಬೈಲ್ ಲಾರಿ ಅಪಘಾತದಲ್ಲಿ ಮೃತಪಟ್ಟ 10 ಜನರ ಅಂತ್ಯಕ್ರಿಯೆ ಸವಣೂರು ಪಟ್ಟಣದ ಖಬರಸ್ತಾನಗಳಲ್ಲಿ ನಡೆಯಿತು.
ಸವಣೂರು ಪಟ್ಟಣಕ್ಕೆ ಶಾಸಕ ಯಾಸೀರಖಾನ್ ಪಠಾಣ ನೇತೃತ್ವದಲ್ಲಿ ಮೃತದೇಹಗಳನ್ನ ತರಲಾಯಿಗಿದ್ದು,
ಮೃತರ ಮನೆಗಳಿಗೆ ಪಾರ್ಥಿವ ಶರೀರಗಳನ್ನು ಹಸ್ತಾಂತರ ಮಾಡಿ, ಮುಸ್ಲಿಂ ಸಂಪ್ರದಾಯದಂತೆ ವಿವಿಧ ವಿಧಾನಗಳನ್ನು ಪೂರೈಸಲಾಯಿತು.
ಈದ್ಗಾ ಮೈದಾನದಲ್ಲಿ ಸಾಲಾಗಿ ಶವವಿಟ್ಟು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ನಂತರ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನೆರವೇರಿತು.
PublicNext
22/01/2025 10:34 pm