ಕಲಬುರಗಿ: ಬೀದರ್ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ ಸೇರಿ ಮೂವರು ಆರೋಪಿಗಳಿಗೆ ಸಂಕ್ರಾಂತಿ ಹಬ್ಬದ ದಿನವೇ ಸಿಐಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಕಲಬುರಗಿಯ ಹೊರವಲಯದ ಕಪನೂರ ಬಡಾವಣೆಯಲ್ಲಿರುವ ಎ1 ಆರೋಪಿ ರಾಜು ಕಪನೂರು ಹಾಗೂ ಶಿವಾಜಿನಗರದಲ್ಲಿರುವ ನಂದಕುಮಾರ್ ನಾಗಭುಜಂಗೆ ಮತ್ತು ಘಾಟಿಗೆ ಲೇಔಟ್ನಲ್ಲಿರುವ ಗೋರಕನಾಥ್ ಮನೆ ಸೇರಿ ಒಟ್ಟು ನಾಲ್ಕು ಕಡೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ್ ಮತ್ತು ಈ ಆರೋಪಿಗಳಿಗೆ ಇರುವ ಸಂಬಂಧದ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಈಗಾಗಲೇ ಈ ಪ್ರಕರಣದ 8 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
PublicNext
14/01/2025 01:53 pm