ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕ್ಸಲ್ ಶರಣಾಗತಿ ತಾಯಿ ಕಣ್ಣೀರು

ರಾಯಚೂರು : ನಕ್ಸಲ್ ಮಾರೆಪ್ಪ ಆರೋಲಿ ಶರಣಾಗತಿ ಹಿನ್ನೆಲೆ ರಾಯಚೂರಿನ ಆರೋಲಿ ಗ್ರಾಮದಲ್ಲಿ ಮಾರೆಪ್ಪ ತಾಯಿ ಗೌರಮ್ಮ ಕಣ್ಣೀರು ಹಾಕಿದ್ದಾರೆ. ಮಗನ ಬರುವಿಕೆಗೆ ಕಾದು ಕುಳಿತ ತಾಯಿ ಗೌರಮ್ಮಕಳೆದ 30 ವರ್ಷದಿಂದ ಮಗನನ್ನು ನೋಡೇ ಇಲ್ವಂತೆ. ಪಿಯುಸಿ ಓದುತ್ತಿದ್ದ ಮಾರೆಪ್ಪ ಆರೋಲಿ ಹಾಗೇ ಮನೆ ಬಿಟ್ಟಿದ್ದರು. ಶಾಂತ ಸ್ವಭಾವದ ಮಾರೆಪ್ಪ, ಏಕಾಏಕಿ ಮನೆಬಿಟ್ಟಿದ್ದರಂತೆ.

ಮಗ ಮನೆ ಬಿಟ್ಟಾಗಿನಿಂದ ಆತಂಕದಲ್ಲಿದ್ದ ಗೌರಮ್ಮ ಸದ್ಯ ಮಗ ಬದುಕಿರುವ ಸುದ್ದಿ ಕೇಳಿ ಫುಲ್ ಖುಷ್ ಆಗಿದ್ದಾರೆ. ನನ್ನ ಮಗ ಮನೆಗೆ ಬರಲಿ ಸಾಕಪ್ಪಾ ಎಂದು ಗೌರಮ್ಮ ಕಣ್ಣೀರಿಟ್ಟಿದ್ದಾರೆ.

Edited By : Suman K
PublicNext

PublicNext

09/01/2025 12:57 pm

Cinque Terre

35.06 K

Cinque Terre

0