ದೊಡ್ಡಬಳ್ಳಾಪುರ : ವೃದ್ಧೆ ಧರಿಸಿದ್ದ ಕರಿಮಣಿ ಸರವನ್ನ ಸರಗಳ್ಳರು ಕಿತ್ತಕೊಂಡು ಪರಾರಿಯಾಗಿದ್ರು, ಸರಗಳ್ಳರನ್ನ ಪತ್ತೆ ಮಾಡಿದ ಪೊಲೀಸರು ಕಳವಾಗಿದ್ದ ಕರಿಮಣಿ ಸರವನ್ನ ವೃದ್ಧೆಗೆ ವಾಪಸ್ ನೀಡಿದ್ದಾರೆ, ಈ ವೇಳೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾರವರಿಗೆ ವೃದ್ಧೆ ಧನ್ಯವಾದ ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿಯಲ್ಲಿ ಆರು ತಿಂಗಳ ಹಿಂದೆ ಸರಗಳ್ಳತನ ಪ್ರಕರಣ ನಡೆದಿದ್ದು, ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು ಹಿಂಬದಿಂದ ಬಂದು ವೃದ್ಧೆ ಕೊರಳಿನಲ್ಲಿದ್ದ ಕರಿಮಣಿ ಸರವನ್ನ ಎಗರಿಸಿ ಪರಾರಿಯಾಗಿದ್ರು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು,
ಇನ್ಸ್ಪೆಕ್ಟರ್ ಸಾಧಿಕ್ ಪಾಷಾರವರ ನೇತೃತ್ವದ ತಂಡ ಸರಗಳ್ಳರನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ, ಆರೋಪಿಗಳನ್ನ ಜೈಲಿಗೆ ಕಳಿಸಿದ್ದಾರೆ, ಕೋರ್ಟ್ ಅನುಮತಿ ಪಡೆದ ಇನ್ಸ್ಪೆಕ್ಟರ್ ಸಾಧಿಕ್ ಪಾಷಾರವರು ವೃದ್ಧೆ ವೆಂಕಟಲಕ್ಷಮ್ಮರವರ 10ಗ್ರಾಂ ತೂಕದ ಕರಿಮಣಿ ಸರವನ್ನ ವಾಪಸ್ ನೀಡಿದ್ದಾರೆ, ಮತ್ತೆ ಕೈಸೇರಿದ ಸರವನ್ನ ನೋಡಿದ ಮುಗ್ದ ವೃದ್ಧೆ ಸಾಧಿಕ್ ಪಾಷಾರವರಿಗೆ ಹೃದಯದಿಂದ ಕೃತಜ್ಞತೆ ಸಲ್ಲಿಸಿದರು.
PublicNext
24/07/2024 08:16 am