ಕೂಡ್ಲಿಗಿ: ಬೈಕ್ಗೆ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಪತಿಗೆ ತೀವ್ರವಾಗಿ ಗಾಯಗೊಂಡಿರುವ ಘಟನೆ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.
ಕೂಡ್ಲಿಗಿ ಪಟ್ಟಣದ 6ನೇ ವಾರ್ಡ್ ನಿವಾಸಿ ಕರಿಯಮ್ಮ (43) ಮೃತರು ಅಂತ ಗುರುತಿಸಲಾಗಿದೆ. ಅವರ ಪತಿ ಕೊತ್ಲೇಶ್ ಗಾಯಗೊಂಡಿದ್ದಾರೆ.
ಪತಿ - ಪತ್ನಿ ಇಬ್ಬರೂ ಕೂಡ್ಲಿಯಿಂದ ಮೊರಬ ಗ್ರಾಮದತ್ತ ಹೋಗ್ತಿದ್ರು. ಈ ವೇಳೆ ರಸ್ತೆಯ ಬಲಕ್ಕೆ ತಿರುವ ವೇಳೆ ಹಿಂದಿನಿಂದ ಅತಿ ವೇಗ ಹಾಗೂ ಚಾಲಕನ ನಿರ್ಲಕ್ಷ್ಯತನದಿಂದ ಕಾರು ಬಂದು ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಗೆ ಗುದ್ದಿದ ಕಾರು ಚಾಲಕ ಬೈಕ್ ಸವಾರರು ಸಾವನ್ನಪ್ಪಿದ್ರೂ ನಿಲ್ಲಿಸದೇ ಜಾಗ ಖಾಲಿ ಮಾಡಿದ್ದ. ಬಳಿಕ ಕಾರು ಚಾಲಕನನ್ನ ಚಿತ್ರದುರ್ಗ ಟೋಲ್ ಬಳಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
08/01/2025 10:48 am