ಹುಬ್ಬಳ್ಳಿ: ದೇವರ ಹುಂಡಿಯ ಕಾಣಿಕೆಯ ದುಡ್ಡನ್ನು ಬಿಡದ ಕಳ್ಳರು.. ರಾತ್ರೋರಾತ್ರಿ ದೇವಸ್ಥಾನದ ಹುಂಡಿ ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ಗಬ್ಬೂರಿನ ಜೈನ ಮಂದಿರಲ್ಲಿ ನಡೆದಿದ್ದು, ಕಳ್ಳತನದ ದೃಶ್ಯ ಮಂದಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂವರು ಖದೀಮರಿಂದ ದೇವಸ್ಥಾನದ ಕಾಣಿಕೆ ಕಳ್ಳತನ ಮಾಡಿದ್ದು, ದೇವಸ್ಥಾನದ ತಿಜೋರಿಯ ಕೀಲಿ ಮುರಿದು ಹಣ ಕಳ್ಳತನ ಮಾಡಿದ್ದಾರೆ. ಸುಮಾರು 7 ಲಕ್ಷಕ್ಕಿಂತ ಹೆಚ್ಚಿನ ಹಣ ದೋಚಿ ಪರಾರಿಯಾಗಿರುವ ಖದೀಮರು, ಜನವರಿ 3ರ ತಡರಾತ್ರಿ ಜೈನ ಮಂದಿರದಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಹೊಸ ಗಬ್ಬೂರಿನಲ್ಲಿನ ಜೈನ ಮಂದಿರದ ಬೀಗ ಒಡೆದು ಒಳ ನುಗ್ಗಿದ ಕಳ್ಳರು, ಮಂದಿರದಲ್ಲಿನ ಕಾಣಿಕೆ ಪೆಟ್ಟಿಗೆಯ ಬೀಗ ಮುರಿದಿದ್ದಾರೆ. ಬಳಿಕ ಕಚೇರಿಯ ತಿಜೋರಿಯ ಬೀಗ ಮುರಿದು ಕಳ್ಳತನ ಮಾಡಿದ್ದು, ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಬಲೆಗೆ ಬೆಂಡಿಗೇರಿ ಪೊಲೀಸರು ಜಾಲ ಬೀಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/01/2025 03:20 pm