ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ಮಾಲೆಕಲ್ಲು ತಿರುಪತಿಯಲ್ಲಿ ವಿಜೃಂಭಣೆಯ ವೈಕುಂಠ ಏಕಾದಶಿ

ಅರಸೀಕೆರೆ : ಅರಸೀಕೆರೆಯ ಮಾಲೇಕಲ್ಲು ತಿರುಪತಿ ಅಮರಗಿರಿಯಲ್ಲಿರುವ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

“ಚಿಕ್ಕ ತಿರುಪತಿ" ಎಂದೇ ಪ್ರಸಿದ್ದಿ ಪಡೆದಿರುವ ಈ ದೇವಾಲಯವು 800 ವರ್ಷಗಳ ಇತಿಹಾಸ ಹೊಂದಿದ್ದು, ಚಿತ್ರದುರ್ಗದ ಪಾಳೇಗಾರರಿಂದ ನಿರ್ಮಿಸಲ್ಪಟ್ಟಿದೆ.

ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಂದ ಭಕ್ತರು ಲಕ್ಷ್ಮೀ ವೆಂಕಟೇಶ್ವರಸ್ವಾಮಿಯ ಆಶೀರ್ವಾದ ಪಡೆಯಲು ದೇವಾಲಯಕ್ಕೆ ಆಗಮಿಸಿದ್ದಾರೆ. ಲಕ್ಷ್ಮೀ ವೆಂಕಟೇಶ್ವರಸ್ವಾಮಿಯ ವಿಗ್ರಹಕ್ಕೆ ವೈಶಿಷ್ಟ್ಯಪೂರ್ಣ ಗಜೇಂದ್ರ ಮೋಕ್ಷ ಅಲಂಕರಿಸಲಾಗಿತ್ತು, ದೇವಿ ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೂ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ಲಕ್ಷ್ಮೀ ವೆಂಕಟೇಶ್ವರಸ್ವಾಮಿಯ ವಿಗ್ರಹಕ್ಕೆ ವೈಶಿಷ್ಟ್ಯಪೂರ್ಣ ಗಜೇಂದ್ರ ಮೋಕ್ಷ ಅಲಂಕರಿಸಲಾಗಿತ್ತು, ದೇವಿ ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೂ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ವೈಕುಂಠ ಏಕಾದಶಿಯ ದಿನ ಮಾತ್ರ ತೆರೆದಿಡುವ ವೈಕುಂಠ ದ್ವಾರ ಇದೇ ದಿನದ ಪ್ರಮುಖ ಆಕರ್ಷಣೆ. ಈ ದ್ವಾರದಿಂದ ಪ್ರವೇಶಿಸಿದರೆ ಮೋಕ್ಷ ಪಡೆಯಬಹುದು ಎಂಬುದು ಭಕ್ತರ ನಂಬಿಕೆ.

ಬೆಳಗ್ಗೆ ಮುಂಜಾವಿನಿಂದಲೇ ಭಕ್ತರು ದೊಡ್ಡ ಸಂಖ್ಯೆಯಲ್ಲಿ ದೇವಾಲಯಕ್ಕೆ ಹರಿದು ಬಂದಿದ್ದಾರೆ. ತೀವ್ರ ಬಿಸಿಲನ್ನೂ ಲೆಕ್ಕಿಸದೆ, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿರುವ ದೃಶ್ಯಗಳು ಕಂಡುಬಂದವು.

ದೇವಾಲಯದ ಆಡಳಿತ ಮಂಡಳಿ ಜನಸಾಗರವನ್ನು ಸಮರ್ಪಕವಾಗಿ ನಿರ್ವಹಿಸಲು ಮತ್ತು ಎಲ್ಲರಿಗೂ ದರ್ಶನದ ಸೌಲಭ್ಯ ಕಲ್ಪಿಸಲು ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಭಕ್ತರಿಗೆ ಉಚಿತವಾಗಿ ಪ್ರಸಾದ ವಿತರಣೆ ಕೂಡ ನಡೆಯುತ್ತಿದೆ.

Edited By : Suman K
Kshetra Samachara

Kshetra Samachara

11/01/2025 12:34 pm

Cinque Terre

4.48 K

Cinque Terre

0