ದಾವಣಗೆರೆ: ಮುಸ್ಲಿಂ ಯುವಕನೋರ್ವ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿ ಆಗಲೆಂದು ಹರಕೆ ತೀರಿಸಲು ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಮದ ಯುವಕ ಶಫೀವುಲ್ಲಾ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಮಾಲೆ ಧರಿಸುತ್ತಾ ಬಂದಿದ್ದಾರೆ. ಬೆಳ್ಳಿಗನೂಡು ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ಕಳೆದ 18 ವರ್ಷಗಳಿಂದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ಇದೇ ಕಾರಣಕ್ಕೆ ಪ್ರತಿ ವರ್ಷ ಮಾಲೆ ಹಾಕಲು ನಿರ್ಧರಿಸಿದ ಶಫೀವುಲ್ಲಾ ಯಾತ್ರೆ ಮುಗಿಯುವವರೆಗೂ ಮನೆ ಸದಸ್ಯರಿಂದ ಕಟ್ಟುನಿಟ್ಟಿನ ವ್ರತ ಮಾಡಿದ್ದಾರೆ.
PublicNext
09/01/2025 01:19 pm