ಹೊಸದುರ್ಗ : ತಾಲೂಕಿನ ಲೋಕದೊಳಲು ಗ್ರಾಮದ ಬೆಟ್ಟದ ಮೇಲಿರುವ ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇವಸ್ಥಾನಕ್ಕೆ ರೂ.1.50 ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಶಾಸಕರು, ದೊಡ್ಡಹೊಟ್ಟೆ ರಂಗನಾಥಸ್ವಾಮಿ ಹೆಸರಾಂತ ದೇವರಾಗಿರುವುದರಿಂದ ಭಕ್ತಿ ಭಾವದಿಂದ ಪೂಜಿಸಿದಾಗ ಎಲ್ಲರಿಗೂ ಆರ್ಶೀವಾದಸಿಗುತ್ತದೆ.
ಬರಿ ಇಂಜಿನಿಯರ್ ಕಂಟ್ರಾಕ್ಟರ್ಗಳ ಮೇಲೆ ಜವಾಬ್ದಾರಿ ಹಾಕದೆ ಊರಿನವರು ಕಾಲ ಕಾಲಕ್ಕೆ ಸರಿಯಾಗಿ ರಸ್ತೆಗೆ ನೀರಿನ ಕ್ಯೂರಿಂಗ್ ಮಾಡಿದಾಗ ಗಟ್ಟಿಮುಟ್ಟಾಗಿರುತ್ತದೆ. ನಿಗಧಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ತಿಳಿಸಿದರು.
ಮಳೆಗಾಲ ಆರಂಭವಾಗುವುದರೊಳಗೆ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರನಿಗೆ ಸೂಚಿಸಿದರು.
ಈ ವೇಳೆ ಲೋಕದೊಳಲು ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
04/02/2025 05:26 pm