ಚಳ್ಳಕೆರೆ: ಉಪನಿಷತ್ತುಗಳು ಭಾರತೀಯ ಸನಾತನ ಪರಂಪರೆಯ ಅಸ್ಮಿತೆಯಾಗಿವೆ ಎಂದು ಚಳ್ಳಕೆರೆಯ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ಅಭಿಪ್ರಾಯಪಟ್ಟರು. ನವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ "ಈಶಾವಾಸ್ಯ ಉಪನಿಷತ್" ಎಂಬ ವಿಷಯದ ಕುರಿತಾಗಿ ಆಯೋಜಿಸಿದ್ದ ವಿಶೇಷ ಪ್ರವಚನ ಮಾಲಿಕೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಉಪನಿಷತ್ತುಗಳಲ್ಲಿ ಬರುವ ಈಶಾವಾಸ್ಯ ಉಪನಿಷತ್ ಶುಕ್ಲ ಯಜುರ್ವೇದದ ವಾಜಸನೀಯ ಸಂಹಿತೆಯಲ್ಲಿ ಬರುವುದು.ಇದರ ಮೊದಲೇ ಶ್ಲೋಕ "ಈಶಾವಾಸ್ಯ" ಎಂಬುವುದುರಿಂದ ಪ್ರಾರಂಭವಾಗುವುದರಿಂದ ಇದಕ್ಕೆ ಅದೇ ಹೆಸರು ಬಂದಿದೆ.ಈ ಉಪನಿಷತ್ ಸಣ್ಣದು, ಕೇವಲ ಹದಿನೆಂಟು ಶ್ಲೋಕಗಳನ್ನು ಮಾತ್ರ ಒಳಗೊಂಡಿದೆ.ಆದರೆ ಇದೊಂದು ಅತಿ ಮುಖ್ಯವಾದ ಉಪನಿಷತ್ ಎಂದು.
Kshetra Samachara
04/02/2025 09:17 pm