ಚಿತ್ರದುರ್ಗ: ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ನೂತನ ಟ್ರಾಫಿಕ್ ಐಲ್ಯಾಂಡ್ ಎಸ್ಪಿ ರಂಜಿತ್ ಕುಮಾರ್ ಬಂಡಾರು ಉದ್ಘಾಟಿಸಿದ್ದಾರೆ.
ಪೊಲೀಸ್ ಇಲಾಖೆ ಹಾಗೂ ಮಣಪ್ಪುರಂ ಗೋಲ್ಡ್ ಕಂಪನಿ ಸಹಯೋಗದೊಂದಿಗೆ ಈ ಒಂದು ಟ್ರಾಫಿಕ್ ಐಲ್ಯಾಂಡ್ ಅ
ನ್ನ ನಿರ್ಮಾಣ ಮಾಡಿದ್ದು ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಆಗಮಿಸಿ ಟೇಪ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿದ್ದಾರೆ.
ಇಡೀ ದಿನ ಬಿಸಿಲಿನಲ್ಲಿ ನಿಂತು ಸಂಚಾರಿ ಪೊಲೀಸರು ವಾಹನಗಳ ದಟ್ಟಣೆ ನಿಯಂತ್ರಣ ಮಾಡುತ್ತಿದ್ದು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಈ ಒಂದು ಟ್ರಾಫಿಕ್ ಐಲ್ಯಾಂಡ್ ನ್ನ ನಿರ್ಮಾಣ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿ ವೈ ಎಸ್ಪಿ ದಿನಕರ್, ಡಿಎಆರ್ ನ ಡಿವೈಎಸ್ಪಿ ಗಣೇಶ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಂಚಾರಿ ಪೊಲೀಸರು ಹಾಜರಿದ್ದರು.
Kshetra Samachara
11/01/2025 03:31 pm