ಮೊಳಕಾಲ್ಮುರು : ಗುರುಪೂರ್ಣಿಮೆಯ ಪ್ರಯುಕ್ತವಾಗಿ ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಾಂಪುರ ರುದ್ರಾಕ್ಷಿ ಮಠದ ಪೂಜ್ಯಶ್ರೀ ಡಾ. ವೀರಭದ್ರಸ್ವಾಮಿಗಳು ಮತ್ತು ಬ್ರಹ್ಮಗಿರಿ ಬೆಟ್ಟದ ಪೂಜ್ಯಶ್ರೀ ಶರಣ ಸೋಮಶೇಖರ ಸ್ವಾಮಿಗಳ ನೇತೃತ್ವದಲ್ಲಿ ನಾನಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಸಾಯಿ ಬಾಬಾ ಮಂದಿರದಲ್ಲಿ ಶ್ರೀ ಸಾಯಿ ಕಾಕಡಾ ಆರತಿ,ಭಕ್ತಾಧಿಗಳ ಹಸ್ತದಿಂದ ಶ್ರೀ ಸಾಯಿ ಬಾಬಾ ವಿಗ್ರಹಕ್ಕೆ ಕ್ಷೀರಾಭಿಷೇಕ, ಶ್ರೀ ಸಾಯಿ ಸತ್ಯವ್ರತ, ನಂತರ ಶಿವ ಸಹಸ್ರ ನಾಮ ಪಠಣೆ 108 ವಿಧದ ನೈವೇದ್ಯದೊಂದಿಗೆ ಆರತಿ ಕಾರ್ಯಕ್ರಮಗಳು ನಡೆದವು.
Kshetra Samachara
21/07/2024 03:49 pm