ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ದಿವ್ಯ ಕರುಣಾಲಯ ಅನಾಥಾಶ್ರಮದ ಬಳಿ ಹಲವು ದಿನಗಳಿಂದ ಅಡಗಿ ಕುಳಿತಿದ್ದ ಎರಡು ದೈತ್ಯ ನಾಗರಹಾವುಗಳನ್ನು ಉರಗ ತಜ್ಞ ಸ್ನೇಕ್ ಆರೀಫ್ ಸೆರೆ ಹಿಡಿದಿದ್ದಾರೆ. ಈ ಆಶ್ರಮಕ್ಕೆ ಸೇವೆ ನೀಡಲು ಬರುವ ದಾನಿಗಳಿಗೆ ಹಾಗೂ ಸ್ಥಳೀಯರಿಗೆ ಆಗಾಗ ಹಾವುಗಳು ಕಾಣಿಸಿಕೊಳ್ಳುತ್ತಿದ್ದವು. ಹೀಗಾಗಿ ಎರಡು ಹಾವುಗಳನ್ನು ಹಿಡಿದು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉರಗ ತಜ್ಞ ಸ್ನೇಕ್ ಆರೀಫ್, ಈವರೆಗೆ ಆರು ಸಾವಿರಕ್ಕೂ ಹೆಚ್ಚು ನಾಗರ ಹಾವುಗಳು ಹಾಗೂ 315 ಕಾಳಿಂಗ ಸರ್ಪಗಳನ್ನು ರಕ್ಷಣೆ ಮಾಡಿದ್ದೇನೆ ಎಂದರು.
Kshetra Samachara
04/02/2025 06:47 pm