ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯ ಮಟ್ಟದಯುವಜನೋತ್ಸವದಲ್ಲಿ ಚಾಮರಾಜನಗರ ಜಿಲ್ಲೆಗೆ ತೃತೀಯ ಸ್ಥಾನ

ಚಾಮರಾಜನಗರ : ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ಗೀತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವ

ಜಿಲ್ಲೆಯ ಎಸ್.ಗುರುರಾಜು ಮತ್ತು ತಂಡದ ಕಲಾವಿದರನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಭಿನಂದಿಸಿದರು.

ರಾಜ್ಯ ಮಟ್ಟದ ಜನಪದ ಗೀತೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದು, 10 ಸಾವಿರ ರೂ.ನಗದು ಬಹುಮಾನವನ್ನು ಪಡೆದ ತಂಡದ ಸದಸ್ಯರಾದ ಎಸ್.ಗುರುರಾಜ್, ಎನ್.ಮಣಿಕಂಠಸ್ವಾಮಿ, ಎಂ.ಕಾರ್ತಿಕ್, ಪಿ.ಪ್ರಜ್ವಲ್, ಟಿ.ಆರ್.ರೂಪ, ಚೇತನ್ ಕುಮಾರ್, ಆಎ್.ಸಾಗರ್ ನಾಯ್ಕ, ಪಿ.ನಂದಿತ, ಎಂ.ಕೆ.ಮನೋಜ್, ಎಂ.ರಾಘವೇಂದ್ರ, ಅವರನ್ನು ಜಿಲ್ಲಾಡಳಿತದ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್,ಜಿಪಂ ಸಿಇಒ ಮೋನಾರೋತ್, ಗಾಯಕ ಸಿ.ಎಂ‌.ನರಸಿಂಹಮೂರ್ತಿ ಸೇರಿದಂತೆ ಇತರರು ಇದ್ದರು.

Edited By : PublicNext Desk
Kshetra Samachara

Kshetra Samachara

07/01/2025 06:12 pm

Cinque Terre

1.52 K

Cinque Terre

0