ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಕಾಲುವೆ ಒಡೆದು ರೈತರ ಜಮೀನಿಗೆ ನೀರು ನುಗ್ಗಿ ರೈತರ ಜಮೀನಿನಲ್ಲಿ ಕ್ವಾರಿಗಳು ಬಿದ್ದು ಜಮೀನಿನ ಸುತ್ತಲು ಹಾಕಿರುವ ಒಡ್ಡುಗಳು ಒಡೆದು ಜೋಳ ಗೋಧಿ ಈರುಳ್ಳಿ ಸೇರಿದಂತೆ ಅಪಾರ ಬೆಳೆ ನಾಶವಾಗಿವೆ.
ವಾರಬಂದಿ ಮಾದರಿಯಲ್ಲಿ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಆದರೆ ಕೆಬಿಜಿಎನ್ಎಲ್ ಅಧಿಕಾರಿಗಳು ಬಸವನಬಾಗೇವಾಡಿ ವ್ಯಾಪ್ತಿಯಲ್ಲಿ ಬರುವ ಟಕ್ಕಳಕಿ ಮುಖ್ಯ ಕಾಲುವೆಗೆ ರಾತ್ರಿ ಇಡೀ ನೀರು ಬಿಟ್ಟಿದ್ದಾರೆ. ಇದರಿಂದ ಕಾಲುವೆಗಳು ತುಂಬಿ ಕಾಲುವೆ ಒಡೆದು ಹೋಗಿವೆ. ಕೆಬಿಜೆಎನ್ ಎಲ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಇನ್ನೂ ನಿರ್ಮಾಣ ಹಂತದಲ್ಲಿರುವ ಟಕ್ಕಳಕಿ ಮುಖ್ಯ ಕಾಲುವೆಗೆ ನೀರು ಬಿಡಲಾಗಿದೆ. ಕೆಬಿಜೆಎನ್ ಎಲ್ ಅಧಿಕಾರಿಗಳು ಯಾವುದೇ ಮುಂಜಾಗ್ರತೆ ಕೈಗೊಳ್ಳದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ
PublicNext
01/02/2025 04:40 pm