ವಿಜಯಪುರ: ವಿಜಯಪುರ ನಗರದಲ್ಲಿ ಕಳ್ಳರು, ದರೋಡೆಕೋರರ ಹಾವಳಿಗೆ ಆತಂಕಗೊಂಡ ನಗರದ ಜನರು ರಾತ್ರಿ ಹೊತ್ತಿನಲ್ಲಿ ಗಸ್ತು ತಿರುಗುತ್ತಿದ್ದಾರೆ.
ದರೋಡೆಕೋರರು ನಗರದ ಹೊರಭಾಗದ ಏರಿಯಾಗಳನ್ನೇ ಟಾರ್ಗೆಟ್ ಮಾಡಿರುವ ಹಿನ್ನಲೆಯಲ್ಲಿ ನಗರದ ರಂಭಾಪುರ, ನಿರ್ವಾಣಶೆಟ್ಟಿ ಲೇ ಔಟ್, ಶಾರದಾನಗರ, ಬಸವೇಶ್ವರ ನಗರ, ರಾಧಾಕೃಷ್ಣನಗರ, ಸಿದ್ದೇಶ್ವರ ಬಡಾವಣೆ, ಗಡಗಿ ಲೇ ಔಟ್ ನಲ್ಲಿ ಯುವಕರು 15ರಿಂದ 20 ಮಂದಿಯ ತಂಡ ಮಾಡಿಕೊಂಡು ರಾತ್ರಿ 12 ಗಂಟೆಯಿಂದ 3 ಗಂಟೆವರೆಗೆ ಏರಿಯಾದಲ್ಲಿ ಗಸ್ತು ತಿರುಗುತ್ತಿದ್ದಾರೆ.
ಒಟ್ಟಾರೆಯಾಗಿ ದರೋಡೆಕೋರರ ಗ್ಯಾಂಗ್ ನಗರದ ಜನರ ನಿದ್ದೆಗೆಡಿಸಿದೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ದರೋಡೆಕೋರರ ಹೆಡೆಮುರಿ ಕಟ್ಟಬೇಕು ಎನ್ನುವುದು ಪಬ್ಲಿಕ್ ನೆಕ್ಸ್ಟ್ ಆಶಯ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್ ವಿಜಯಪುರ
PublicNext
31/01/2025 09:43 pm