ಬೆಂಗಳೂರು: ಇತ್ತೀಚೆಗಷ್ಟೇ ಬಿಬಿಎಂಪಿ ಶಾಲೆಗಳ ದಾಖಲಾತಿ ಪ್ರಮಾಣ ಕುಸಿತವಾಗಿತ್ತು. ಇದರಿಂದ ಅಲರ್ಟ್ ಆದ ಪಾಲಿಕೆ, ಇದೀಗ ಹೈಕೋರ್ಟ್ ಆದೇಶದಂತೆ ಪಾಲಿಕೆ ವ್ಯಾಪ್ತಿಯಲ್ಲಿನ ಶಾಲೆ ಬಿಟ್ಟ ಮಕ್ಕಳ ಸರ್ವೆಗೆ ಮುಂದಾಗಿದೆ. ಸದ್ಯ ಗಾಂಧಿನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕವಾಗಿ ಸರ್ವೆಗೆ ತಯಾರಿ ನಡೆಸಿರೋ ಪಾಲಿಕೆ, ಸರ್ವೆ ಜವಾಬ್ದಾರಿಯನ್ನ ಖಾಸಗಿ ಸಂಸ್ಥೆಗೆ ವಹಿಸಿದ್ದು ಪ್ರತಿ ಮನೆಗೆ ತಲಾ 10 ರೂಪಾಯಿಯಂತೆ 30 ಲಕ್ಷ ಮನೆಗಳಿಗೆ ಬರೋಬ್ಬರಿ 3 ಕೋಟಿ ಮೀಸಲಿಡಲು ಹೊರಟಿದೆ.
ಸದ್ಯ ಪಾಲಿಕೆ ವ್ಯಾಪ್ತಿಯ ಸ್ಲಂಗಳು, ಮಧ್ಯಮವರ್ಗದ ಜನರು ವಾಸಿಸೋ ಜಾಗಗಳಲ್ಲೂ ಸರ್ವೆಗೆ ಸಜ್ಜಾಗಿರೋ ಪಾಲಿಕೆ, ಮಕ್ಕಳು ಶಾಲೆ ಬಿಡಲು ಇರೋ ಕಾರಣ ಹಾಗೂ ಪೋಷಕರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕಲೆಹಾಕೋದಕ್ಕೆ ಪ್ಲಾನ್ ಮಾಡಿದೆ. ಗಾಂಧಿನಗರ ವಿಧಾನಸಭಾಕ್ಷೇತ್ರದ ಬಳಿಕ ಇತರೆ ಭಾಗಗಳಲ್ಲೂ ಸರ್ವೆ ನಡೆಸೋಕೆ ಚಿಂತನೆ ನಡೆಸಿರೋ ಪಾಲಿಕೆ ಇದಕ್ಕಾಗಿ ಖಾಸಗಿ ಸಂಸ್ಥೆಗಳಿಗೆ ಟೆಂಡರ್ ಕರೆದಿದೆ.
ಇತ್ತ ಪಾಲಿಕೆ ನಡೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಒಂದೆಡೆ ಪಾಲಿಕೆ ಶಾಲೆಗಳಿಗೆ ಮೂಲಸೌಕರ್ಯ ನೀಡದೇ ಸರ್ವೆಗೆ ಕೋಟಿ ಕೋಟಿ ಹಣ ಕೊಡಲು ಹೊರಟಿದ್ರೆ, ಮತ್ತೊಂದೆಡೆ ಈಗಾಗಲೇ ಸರ್ವೇ ಹೆಸರಿನಲ್ಲಿ ಅಕ್ರಮ ಎಸಗಿದ್ದ ಚಿಲುಮೆ ಸಂಸ್ಥೆಯ ಹಗರಣದಿಂದ ಜನರು ತಮ್ಮ ಡೇಟಾ ನೀಡೋಕೆ ಆತಂಕಪಡುವಂತಾಗಿದೆ. ಸದ್ಯ ಮಕ್ಕಳ ಸರ್ವೇ ನೆಪದಲ್ಲಿ ಖಾಸಗಿ ಮಾಹಿತಿ ಕಲೆಹಾಕೋ ಖಾಸಗಿ ಸಂಸ್ಥೆ, ಅದನ್ನ ದುರುಪಯೋಗ ಮಾಡಿಕೊಳ್ಳಬಹುದು ಅನ್ನೋ ಆರೋಪ ಕೂಡ ಕೇಳಿಬರ್ತಿದೆ.
PublicNext
25/07/2024 01:59 pm